ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಒಲಿಂಪಿಕ್ಸ್ ರಸಪ್ರಶ್ನೆ ಸ್ಪರ್ಧೆ:ವಿಜೇತರಿಗೆ ಬಹುಮಾನ ವಿತರಣೆ

Last Updated 6 ಅಕ್ಟೋಬರ್ 2012, 6:10 IST
ಅಕ್ಷರ ಗಾತ್ರ

ದಾವಣಗೆರೆ: ಲಂಡನ್ `ಒಲಿಂಪಿಕ್ಸ್~ ಸಂದರ್ಭದಲ್ಲಿ `ಪ್ರಜಾವಾಣಿ~ ಮತ್ತು `ಡೆಕ್ಕನ್ ಹೆರಾಲ್ಡ್~ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಹಯೋಗದಲ್ಲಿ ನಡೆಸಿದ `ಒಲಿಂಪಿಕ್ಸ್ ರಸಪ್ರಶ್ನೆ ಸ್ಪರ್ಧೆ~ಯಲ್ಲಿ ವಿಜೇತರಾದ 9 ಮಂದಿಗೆ `ಪ್ರಜಾವಾಣಿ~ ದಾವಣಗೆರೆ ಕಚೇರಿಯಲ್ಲಿ ಶುಕ್ರವಾರ ಬಹುಮಾನ ವಿತರಿಸಲಾಯಿತು.

ವಿಜೇತರಿಗೆ `ಪ್ರಜಾವಾಣಿ~ ದಾವಣಗೆರೆ ಬ್ಯೂರೋ ಮುಖ್ಯಸ್ಥ ಎಂ.ಎಸ್. ರಾಜೇಂದ್ರಕುಮಾರ್, ಪ್ರಸರಣ ವಿಭಾಗದ ಸಹಾಯಕ ವ್ಯವಸ್ಥಾಪಕ ಪ್ರಸನ್ನಕುಮಾರ್ ಎಸ್.ಐ. ಹಾಗೂ ಜಾಹೀರಾತು ವಿಭಾಗದ ಸಹಾಯಕ ವ್ಯವಸ್ಥಾಪಕ ಕೆ.ಜಿ. ಲೋಕೇಶ್ ಬಹುಮಾನ ವಿತರಣೆ ಮಾಡಿದರು.

ದಾವಣಗೆರೆಯ ಎಸ್. ವಸಂತ್ (ಸ್ಪರ್ಧೆ-6) ಅವರಿಗೆ ತೃತೀಯ ಬಹುಮಾನವಾಗಿ ಮೊಬೈಲ್ ವಿತರಿಸಲಾಯಿತು.
ಸಮಾಧಾನಕರ ಬಹುಮಾನ ಪಡೆದವರು: ದಾವಣಗೆರೆ ಹೊಂಡದ ರಸ್ತೆಯ ಬಿ.ಎಸ್. ಕ್ರಾಸ್ ನಿವಾಸಿ  ಕೆ.ಎಸ್. ಮಂಜುನಾಥ್ (ಸ್ಪರ್ಧೆ-1). ದಾವಣಗೆರೆ ಆಂಜನೇಯ ಬಡಾವಣೆ 14ನೇ ಕ್ರಾಸ್‌ನ ಎಸ್.ಎಸ್. ಅಕ್ಷಯ್, ಹರಿಹರದ ಕನಕದಾಸ ನಗರದ 2ನೇ ಮುಖ್ಯರಸ್ತೆ 4ನೇ ಕ್ರಾಸ್‌ನ ಕೆ.ಎಂ. ವಿಭೂತಿ, ದಾವಣಗೆರೆಯ ವಿದ್ಯಾನಗರ 18ನೇ ಕ್ರಾಸ್‌ನ  ಎಸ್.ಬಿ. ಜಯಪ್ರಕಾಶ್ (ಸ್ಪರ್ಧೆ-3) ಅವರಿಗೆ ಬಹುಮಾನವಾಗಿ ವಾಚ್‌ಗಳನ್ನು ವಿತರಿಸಲಾಯಿತು.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಮದಕರಿ ನಗರದ ಓಬಣ್ಣ, ಚನ್ನಗಿರಿ ತಾಲ್ಲೂಕಿನ ಮರಬನಹಳ್ಳಿಯ ಡಿ.ಎನ್. ಬಸವರಾಜ್ (ಸ್ಪರ್ಧೆ-5). ದಾವಣಗೆರೆ ಹೊಂಡದ ರಸ್ತೆಯ ಬಾಳೆಹೊಲದ ಸಿದ್ದಲಿಂಗಪ್ಪ ಕ್ರಾಸ್‌ನ ಕೆ.ಎಸ್. ಲಿಂಗರಾಜ್, ಹರಪನಹಳ್ಳಿ ಪಟ್ಟಣ ಭಾವಿಹಳ್ಳಿ ರಸ್ತೆಯ ಪಿ. ಅನುರಾಧಾ (ಸ್ಪರ್ಧೆ 6) ಅವರಿಗೆ ಬಹುಮಾನವಾಗಿ ಡಿನ್ನರ್‌ಸೆಟ್‌ಗಳನ್ನು ವಿತರಣೆ ಮಾಡಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT