ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪ್ರಜಾವಾಣಿ' ವಿದ್ಯಾರ್ಥಿವೇತನ ಪಡೆದವರ ಅಭಿಮತ

Last Updated 2 ಜೂನ್ 2013, 19:59 IST
ಅಕ್ಷರ ಗಾತ್ರ

`ಪ್ರಜಾವಾಣಿ' ವಿದ್ಯಾರ್ಥಿವೇತನ ಪಡೆದವರ ಅಭಿಮತ

`ಹೆಚ್ಚಿನ ಅನುಕೂಲವಾಯಿತು'

ಪದೇ ಪದೇ ಬರಗಾಲ ಎದುರಿಸುತ್ತಿರುವ ನಮ್ಮಂತಹ ರೈತರ ಮಕ್ಕಳಿಗೆ `ಪ್ರಜಾವಾಣಿ' ಬಳಗದ ಪ್ರೋತ್ಸಾಹ ಮೆಚ್ಚುವಂಥದ್ದು. ನನ್ನ ಮಗನಿಗೆ ಡಿಪ್ಲೊಮಾ ಮೆಕ್ಯಾನಿಕಲ್ ಪ್ರಥಮ ವರ್ಷದ ಶುಲ್ಕವಾಗಿ ಪತ್ರಿಕೆಯು ಸಹಾಯ ಧನ ನೀಡಿದ್ದು ಹೆಚ್ಚಿನ ಅನುಕೂಲವಾಯಿತು. ಈಗ ದಾವಣಗೆರೆ ಡಿಆರ್‌ಆರ್ ಪಾಲಿಟೆಕ್ನಿಕ್‌ನಲ್ಲಿ ಚೆನ್ನಾಗಿ ಓದಿ, ಮೂರನೇ ಸೆಮಿಸ್ಟರ್ ಪರೀಕ್ಷೆ ಬರೆಯುತ್ತಿದ್ದಾನೆ. ಹಲವಾರು ಪ್ರತಿಭಾವಂತ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ `ಪ್ರಜಾವಾಣಿ' ಪತ್ರಿಕಾ ಬಳಗವು ನೀಡುತ್ತಿರುವ ಸಹಾಯ ಬಹಳ ದೊಡ್ಡದು.
-ಶಂಕ್ರಪ್ಪ ಬಣಕಾರ (ಸಚಿನ್ ಬಣಕಾರ ತಂದೆ,ರಾಣೆಬೆನ್ನೂರು -ಹಾವೇರಿ ಜಿಲ್ಲೆ)

`ನನಸಾದ ಉನ್ನತ ಶಿಕ್ಷಣ ಕನಸು'

`ಪ್ರಜಾವಾಣಿ' ಸ್ಕಾಲರ್‌ಶಿಪ್‌ನಿಂದಾಗಿ ನನಗೆ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಯಿತು. ಎಸ್‌ಎಸ್‌ಎಲ್‌ಸಿ ಮುಗಿದ ತಕ್ಷಣ ಉನ್ನತ ಶಿಕ್ಷಣದ ಕನಸು ಎಲ್ಲಿ ಭಗ್ನವಾಗುತ್ತದೆಯೋ ಎಂಬ ಭಯವಿತ್ತು. ಆದರೆ, `ಪ್ರಜಾವಾಣಿ' ಸ್ಕಾಲರ್‌ಶಿಪ್ ನೀಡುತ್ತದೆ ಎಂಬ ಸಂಗತಿ ತಿಳಿದು ಉನ್ನತ ಶಿಕ್ಷಣದ ಕನಸಿಗೆ ರೆಕ್ಕೆ- ಪುಕ್ಕಗಳು ಬಂದವು.

`ಪ್ರಜಾವಾಣಿ' ಸ್ಕಾಲರ್‌ಶಿಪ್ ಪಡೆದು ಡಿಪ್ಲೊಮಾ (ಇ ಆ್ಯಂಡ್ ಸಿ)  ಓದುತ್ತಿದ್ದೇನೆ. ಮೊದಲ ಸೆಮಿಸ್ಟರ್‌ನಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದೇನೆ. `ಪ್ರಜಾವಾಣಿ' ಸ್ಕಾಲರ್‌ಶಿಪ್ ಸದುಪಯೋಗ ಪಡೆದುಕೊಂಡು ದೊಡ್ಡ ಸಾಧನೆ ಮಾಡುವ ಹಂಬಲ ಹೊಂದಿದ್ದೇನೆ. ಈ  ಸ್ಕಾಲರ್‌ಶಿಪ್‌ನಿಂದಾಗಿ ಹಲವಾರು ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಂಡಿದೆ.'
-ಲಕ್ಷ್ಮಿನೀಲಕಂಠಪ್ಪ ದಗಲ್, ಗಜೇಂದ್ರಗಡ (ಗದಗ ಜಿಲ್ಲೆ)

ಬಡ ವಿದ್ಯಾರ್ಥಿಗಳಿಗೆ ನೆರವಾಗಿರಿ ಉದಾರ ಕೊಡುಗೆ ನೀಡಿ

ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್‌ನ ಮಾತೃ ಸಂಸ್ಥೆ ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್, ಸ್ಥಾಪಿಸಿರುವ ಪರಿಹಾರ ಟ್ರಸ್ಟ್, ಪ್ರತಿ ವರ್ಷಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾದ ಅರ್ಹ ಬಡ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಮುಂದಿನ ಶಿಕ್ಷಣಕ್ಕಾಗಿ ಧನ ಸಹಾಯ ಮಾಡುತ್ತಾಬಂದಿದೆ.

ಸಾರ್ವಜನಿಕರು ಮತ್ತು ದಾನಿಗಳು ಸಂಸ್ಥೆಯ ಈ ಉದ್ದೇಶಕ್ಕೆ ನೆರವಾಗಬೇಕೆಂದು ಕೋರುತ್ತೇವೆ. ಚೆಕ್ ಅಥವಾ ಡಿ.ಡಿ. ರೂಪದಲ್ಲಿ ಹಣವನ್ನು `ಡೆಕ್ಕನ್ ಹೆರಾಲ್ಡ್-ಪ್ರಜಾವಾಣಿ ಪರಿಹಾರ ಟ್ರಸ್ಟ್' ಹೆಸರಿಗೆ ಕಳುಹಿಸಿ. ಒಂದು ಸಾವಿರ ರೂಪಾಯಿಗಿಂತ ಅಧಿಕ ನೆರವು ನೀಡುವವರ ಹೆಸರನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು. ಈ ದೇಣಿಗೆಗೆ ಆದಾಯ ತೆರಿಗೆ ಸೆಕ್ಷನ್ 80 ಜಿ ಅನ್ವಯ ಶೇ.50 ರಷ್ಟು ಆದಾಯ ತೆರಿಗೆ ವಿನಾಯಿತಿ ಇದೆ. ಆನ್‌ಲೈನ್ ಮೂಲಕ http://www.careeravenues.in/ dhutility/edurelief.aspxಈ ಅಕೌಂಟಿಗೆ ಹಣವನ್ನು ವರ್ಗಾಹಿಸುವ ಸೌಲಭ್ಯವೂ ಇದೆ.

ವಿಳಾಸ: ಮ್ಯಾನೇಜರ್, ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ ಪರಿಹಾರ ಟ್ರಸ್ಟ್, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು- 560 001

ಸೂಚನೆ: ಲಕೋಟೆ ಮೇಲೆ `ಶೈಕ್ಷಣಿಕ ನೆರವಿಗೆ ಕೊಡುಗೆ' ಎಂದು ನಮೂದಿಸಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT