ಕಲಾಸಿಂಧು ಅಕಾಡೆಮಿಯ ಕಲಾವಿದೆ ಪೂರ್ಣಿಮಾ ಗುರುರಾಜ್ ಅವರ ಶಿಷ್ಯೆ ಪ್ರಿಯಾಂಕ ಇದೇ ಭಾನುವಾರ ರಂಗಪ್ರವೇಶ ಮಾಡಲಿದ್ದಾರೆ.
ಅವರ ರಂಗಾಭಿವಂದನೆ ಕಾರ್ಯಕ್ರಮ ಜೆ.ಎಸ್.ಎಸ್.ಆಡಿಟೋರಿಯಂನಲ್ಲಿ ನಡೆಯಲಿದೆ. ಚಿಕ್ಕ ವಯಸ್ಸಿನಿಂದಲೇ ಭರತನಾಟ್ಯದಲ್ಲಿ ಆಸಕ್ತಿ ಹೊಂದಿದ್ದ ಪ್ರಿಯಾಂಕ ಅವರಿಗೆ ತಾಯಿ ನಿರ್ಮಲ ಅವರ ಪ್ರೋತ್ಸಾಹ ಹಾಗೂ ಅಕಾಡೆಮಿಯ ಬೆಂಬಲ ಇದೆ.
ಕಾಲೇಜಿನಲ್ಲಿ ಎನ್ಸಿಸಿಯಲ್ಲೂ ಪಾಲ್ಗೊಂಡಿರುವ ಪ್ರಿಯಾಂಕ ಕಲಾಜ್ಯೋತಿ, ಪ್ರತಿಭಾ ಪುರಸ್ಕಾರ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಸಮಾರಂಭದಲ್ಲಿ ಎಂ.ಆರ್.ದೊರೆಸ್ವಾಮಿ, ಡಾ.ಕೆ.ಎಸ್.ಸಮ್ಮೀರಾ ಸಿಂಹ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸ್ಥಳ: ಶಿವರತ್ರೀಶ್ವರ ಸೆಂಟರ್(ಜೆಎಸ್ಎಸ್), 8ನೇ ಬ್ಲಾಕ್, ಜಯನಗರ. ಸಂಜೆ 6.30.