ಶಿವಮೊಗ್ಗ: ಎಸ್. ಬಂಗಾರಪ್ಪ ಶ್ರದ್ಧಾಂಜಲಿ ಸಮಿತಿಯು ಸೊರಬದ ಸಮನವಳ್ಳಿಯ `ಬಂಗಾರ ತೋಟ~ದಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಶ್ರದ್ಧಾಂಜಲಿ ಗುರುವಾರ (ಜ.5) ಹಮ್ಮಿಕೊಂಡಿದೆ.
ಅಂದು ಮುಂಜಾನೆ 7ಕ್ಕೆ ಕುಬಟೂರಿನ `ಬಂಗಾರ ನಿವಾಸ~ದಲ್ಲಿ ಕುಟುಂಬ ವರ್ಗದಿಂದ ಪೂಜಾ ಕಾರ್ಯಕ್ರಮ ನಡೆಯಲಿದ್ದು, 8.30ಕ್ಕೆ ಸೊರಬ ಟೌನ್ನಲ್ಲಿ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಂದ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.