ಬಂಜಾರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ: ಶುಕ್ರವಾರ ಬಂಜಾರ ಪ್ರದರ್ಶನ ಕಲಾ ಉತ್ಸವ ಹಾಗೂ ಪ್ರಶಸ್ತಿ ಪ್ರದಾನ.
ಮಧ್ಯಾಹ್ನ 3ಕ್ಕೆ ಗೊ.ರು.ಚೆನ್ನಬಸಪ್ಪ ಅವರಿಂದ ಉತ್ಸವಕ್ಕೆ ಚಾಲನೆ. ಅತಿಥಿಗಳು: ಸಿ.ಬಸವಲಿಂಗಯ್ಯ. ಅಧ್ಯಕ್ಷತೆ: ಡಿ.ರಾಮಾನಾಯಕ್.
ವಿಜಾಪುರದ ಸೇವಾಭಾಯ ಕಲಾ ತಂಡ, ದಾವಣಗೆರೆಯ ಸಂಸ್ಕೃತಿ ಅಧ್ಯಯನ ಕೇಂದ್ರ, ಬೆಂಗಳೂರಿನ ಭೀಮ್ ನಾಯಕ್ ಮತ್ತು ತಂಡ, ಕುಮಾರ್ ನಾಯಕ್ ಮತ್ತು ತಂಡದಿಂದ ಲಂಬಾಣಿ ಕಲಾ ಪ್ರದರ್ಶನ. ಪ್ರಶಸ್ತಿ ವಿಜೇತ ಬಂಜಾರ ಚಿತ್ರ ‘ಸೋನಾ’ದ ಪ್ರದರ್ಶನ.
ಸಂಜೆ 6ಕ್ಕೆ ರೇವು ನಾಯಕ್ ಬಿಳಮಗಿ ಅವರಿಂದ ಸಭಾ ಕಾರ್ಯಕ್ರಮ ಉದ್ಘಾಟನೆ. ಡಾ.ಎಂ.ಶಂಕರ್ ನಾಯಕ್ ಅವರಿಂದ ಡಾ.ಶಂತನಾಯ್ಕ ಶಿರಗಾನ ಹಳ್ಳಿ ಅವರ ಲಮಾಣಿ ಆತ್ಮಕಥನ ಕಾವ್ಯ ಅವರ ಕೃತಿ ಲೋಕಾರ್ಪಣೆ. ರಮೇಶ್ ಬಿ.ಝಳಕಿ ಅವರಿಂದ ಸಂತ ಸೇವಾಲಾಲ್ ಪ್ರಶಸ್ತಿ ಪ್ರದಾನ.
ಹೊಸಜೋಗ ಕುಮಾರ್ ರಾಠೋಡ್ ಮತ್ತು ಚಿಂಚೋಳ್ಳಿ ತಾಂಡದ ದೇವಿದಾಸ್ ಪವರ್ ಅವರಿಗೆ ಅಭಿನಂದನೆ.
ಸಂಜೆ 7ಕ್ಕೆ ಖಾಡೇರ್ ಬೋಟಿ ಛೋಡೋ ನಾಟಕ ಪ್ರದರ್ಶನ. (ನಿರ್ದೇಶನ: ಶಿವಮೊಗ್ಗದ ಸತೀಶ್ಗಟ್ಟಿ ಮಂಡೆಲ).
ಸ್ಥಳ; ರವೀಂದ್ರ ಕಲಾ ಕ್ಷೇತ್ರ, ಜೆ.ಸಿ.ರಸ್ತೆ.