ಹುಬ್ಬಳ್ಳಿ: ಖಾಸಗಿ ಬಸ್ ಹಾಗೂ ಆಟೊ ನಡುವೆ ಡಿಕ್ಕಿಯಾಗಿ ಆಟೊದಲ್ಲಿದ್ದ ಬಾಲಕ ಸೇರಿ ಮೂವರು ಸ್ಥಳದಲ್ಲೇ ಸತ್ತ ಘಟನೆ ತಾಲ್ಲೂಕಿನ ಕುಸುಗಲ್ಲ ಹತ್ತಿರದ ಕಿರೇಸೂರ ಸೇತುವೆ ಬಳಿ ಶುಕ್ರವಾರ ನಡೆದಿದೆ.
ಮೃತರನ್ನು ಹುಬ್ಬಳ್ಳಿಯ ಆನಂದ ನಗರದ ನಿವಾಸಿಗಳಾದ ಖ್ವಾಜಾ ಹುಸೇನ್ ಚೆಕ್ಕೆವಾಲೆ (50), ಇವರ ಪುತ್ರಿ ನಸ್ರೀನ್ (18) ಹಾಗೂ ಮೊಮ್ಮಗ ರೇಹಾನ್ (5) ಎಂದು ಗುರುತಿಸಲಾಗಿದೆ.