ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಬಾ ರಾಮ್‌ದೇವ್ ಮೇಲೆ ಕಪ್ಪು ಶಾಯಿ

Last Updated 14 ಜನವರಿ 2012, 12:10 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬಾಬಾ ರಾಮ್‌ದೇವ್ ಮೇಲೆ ಕಮ್ರಾನ್ ಸಿದ್ದಿಕಿ ಎಂಬಾತ ಪತ್ರಿಕಾಗೋಷ್ಠಿಯಲ್ಲಿ ಕಪ್ಪು ಶಾಯಿ ಎರಚಿದ ಘಟನೆ ಶನಿವಾರ ನಡೆದಿದೆ.

ಇಲ್ಲಿನ  `ಕಾನ್‌ಸ್ಟಿಟ್ಯೂಷನ್ ಕ್ಲಬ್~ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ರಾಮ್‌ದೇವ್ ಈತ 2008ರಲ್ಲಿ ನಡೆದ ಬಾಟ್ಲಾ ಹೌಸ್ ಎನ್‌ಕೌಂಟರ್ ಬಗ್ಗೆ ರಾಮ್‌ದೇವ್ ಅವರನ್ನು ಪ್ರಶ್ನಿಸಿದ. ಇದನ್ನು ರಾಮ್‌ದೇವ್ ನಿರ್ಲಕ್ಷಿದರು. ಮರು ಕ್ಷಣವೇ ಆತ ಅವರ ಮೇಲೆ ಶಾಯಿ ಎರಚಿದ. ರಾಮ್‌ದೇವ್ ಅವರ ಬಲಗಣ್ಣಿನ ಮೇಲೆ ಶಾಯಿ ಎರಚಿದ ಈತನನ್ನು ರಾಮ್‌ದೇವ್ ಅವರ ಬೆಂಬಲಿಗರು ಹಿಡಿದುಕೊಂಡು ಹಿಗ್ಗಾಮಗ್ಗಾ ಥಳಿಸಿದರು. ಕಮ್ರಾನ್ ಸಿದ್ದಿಕಿಯ ಶರ್ಟ್ ಹರಿದು ಛಿದ್ರವಾಗಿ, ತುಟಿಯಿಂದ ರಕ್ತ ಸೋರುತ್ತಿತ್ತು. ಅಷ್ಟರಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡರು.

ಗೋಷ್ಠಿಯಲ್ಲಿ ಜನತಾ ಪಕ್ಷದ ಮುಖಂಡ ಸುಬ್ರಮಣಿಯನ್‌ಸ್ವಾಮಿ ಅವರೂ ಇದ್ದರು.

ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕಪ್ಪುಹಣದ ವಿರುದ್ಧ ತಾವು ರೂಪಿಸಿರುವ ಹೋರಾಟದ ಬಗ್ಗೆ ಮಾಹಿತಿ ನೀಡಲು ರಾಮ್‌ದೇವ್ ಅವರು `ಕಾನ್‌ಸ್ಟಿಟ್ಯೂಷನ್ ಕ್ಲಬ್~ನಲ್ಲಿ ಈ ಪತ್ರಿಕಾಗೋಷ್ಠಿ ಕರೆದಿದ್ದರು.

ಶಾಯಿ ಎರಚಿದಾತ ದೆಹಲಿ ನಿವಾಸಿಯಾಗಿದ್ದು,  ಈತ `ರಿಯಲ್ ಕಾಸ್~ ಎಂಬ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯನ್ನು ನಡೆಸುತ್ತಿದ್ದಾನೆ. ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣ ಸಂಬಂಧ ದೂರು ನೀಡಿದವರಲ್ಲಿ ಈ ಸಂಸ್ಥೆಯೂ ಒಂದು.

ಈ ಘಟನೆಯಿಂದ ನಂತರ ರಾಮ್‌ದೇವ್ ಕೂಡಲೇ ಪತ್ರಿಕಾಗೋಷ್ಠಿಯನ್ನು ರದ್ದುಪಡಿಸಿದರು.  ಅವರನ್ನು ಪೊಲೀಸರ ಬೆಂಗಾವಲಿನಲ್ಲಿ ಕ್ಲಬ್‌ನಿಂದ ಕರೆದೊಯ್ಯುವಾಗ ನೂಕುನುಗ್ಗುಲು ಉಂಟಾಯಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮ್‌ದೇವ್, ಇಂತಹ ಘಟನೆಗಳಿಂದ ತಾವು ವಿಚಲಿತರಾಗುವುದಿಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರಿಯುತ್ತದೆ ಎಂದರು.

ಈ ಘಟನೆಯನ್ನು ಬಿಜೆಪಿ ಹಾಗೂ ಆರ್‌ಜೆಡಿ ಪಕ್ಷಗಳು ಖಂಡಿಸಿವೆ. ಬಿಜೆಪಿಯ ಸುಷ್ಮಾ ಸ್ವರಾಜ್ ಹಾಗೂ ಅರುಣ್‌ಜೇಟ್ಲಿ ಅವರು ಈ ಕೃತ್ಯವನ್ನು ಕಟುವಾಗಿ ಖಂಡಿಸಿದ್ದು, ಇಂಕ್ ಎರಚಿದವನನ್ನು ಜೈಲಿಗೆ ಕಳುಹಿಸಬೇಕೆಂದು ಆಗ್ರಹಿಸಿದ್ದರೆ, ಅತ್ತ ರಾಷ್ಟ್ರೀಯ ಜನತಾದಳದ ಮುಖಂಡ ಲಾಲೂ ಪ್ರಸಾದ್ ಅವರು ಇದೊಂದು ಕಾಯಿಲೆಯಾಗಿ ಹರಡುತ್ತಿದೆ. ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಅವರ ಮೇಲೆ ಬೂಟ್ ಎಸೆದದ್ದೇ ಎಸೆದದ್ದು, ಎಲ್ಲರೂ ಅದನ್ನೇ ಹಿಂಬಾಲಿಸುತ್ತಿದ್ದಾರೆ. ರಾಮದೇವ್ ಅವರು ಒಬ್ಬ ಒಳ್ಳೆಯ ವ್ಯಕ್ತಿ. ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಹಾಗಾಗಿ ಅವರ ಮೇಲೆ ಇಂಕ್ ಎರಚಿದ್ದು ಅಕ್ಷಮ್ಯ ಎಂದು ಹೇಳಿದ್ದಾರೆ.

ಅಣ್ಣಾ ತಂಡವೂ ಕೂಡ ಇದನ್ನು ಖಂಡಿಸಿದ್ದು, ತಂಡದ ಸದಸ್ಯ ಮನೀಷ್ ಸಿಸೋಡಿಯಾ ಅವರು ಕಪ್ಪು ಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ಬಾಬಾ ಅವರು ನಡೆಸುತ್ತಿರುವ ಹೋರಾಟದ ದಿಕ್ಕು ತಪ್ಪಿಸಲು ಅವರ ಮೇಲೆ ಇಂಕ್ ಎರಚಲಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT