ಡಿವೈಎಸ್ ಪಿ. ವಿಜಯ ಡಂಬಳ, ಮಕ್ಕಳ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ.ಬೆನಕೊಪ್ಪ, ಹೂಗಾರ, ಜಿ.ಸಿ.ರೇಷ್ಮೇ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಭಾರತಿ ಶೆಟ್ಟರ ಹಾಜರಿದ್ದರು. ವಿವಿಧ ಶಾಲಾ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಬಾಲ್ಯ ವಿವಾಹ ನಿಷೇದ ಕುರಿತ ಘೋಷಣೆಗಳನ್ನು ಕೂಗುತ್ತಾ ಬಿತ್ತಿ ಪತ್ರಗಳನ್ನು ಹಿಡಿದುಕೊಂಡು ಮ್ಯಾರಥಾನ್ ದಲ್ಲಿ ಪಾಲ್ಗೊಂಡಿದ್ದರು.
ನಗರದ ಮಹಾತ್ಮಾ ಗಾಂಧಿವೃತ್ತದಿಂದ ಪ್ರಾರಂಭಗೊಂಡ ಮ್ಯಾರಥಾನ್ ಭೂಮರಡ್ಡಿ ವೃತ್ತ,ಹಳೇ ಡಿಸಿ ಆಪೀಸ್ ವೃತ್ತ, ಕಿತ್ತೂರ ಚನ್ನಮ್ಮ ರಾಣಿ ವೃತ್ತ, ಮುಳಗುಂದ ನಾಕಾದ ಮೂಲಕ ತೆರಳಿ ಜಿಲ್ಲಾಧಿಕಾರಿ ಆಡಳಿತ ಭವನದಲ್ಲಿ ಮುಕ್ತಾಯಗೊಂಡಿತು.