*ನವೆಂಬರ್ ೧೨ರಂದು ಎಲ್.ಎನ್. ಅವರ ‘ಜಯನಗರಕ್ಕೆ ನೇರ ಬಸ್ ಬೇಕು’ ಎಂಬ ದೂರು.
ಪ್ರಸ್ತುತ ವಿವೇಕನಗರ, ಆಸ್ಟಿನ್ ಟೌನ್ ಮಾರ್ಗವಾಗಿಮಾರ್ಗ ಸಂಖ್ಯೆ:೨೦೧ರಲ್ಲಿ ಸುಮಾರು ೫೦ ಬಸ್ಸುಗಳ ಸಾರಿಗೆ ಸೌಲಭ್ಯವಿದ್ದು, ಅವುಗಳಲ್ಲಿ ಜಯನಗರ ೯ನೇ ಬ್ಲಾಕ್, ೫ನೇ ಬ್ಲಾಕ್ ಹಾಗೂ ಬನಶಂಕರಿ ಕಡೆಗೆ ಪ್ರಯಾಣಿಸಬಹುದಾಗಿದೆ. ಹಾಗೂ ಪ್ರಮುಖ ಬಸ್ ನಿಲ್ದಾಣಗಳಾದ ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್.ಮಾರುಕಟ್ಟೆ ಮತ್ತು ಶಿವಾಜಿನಗರಗಳಿಂದ ವಿವೇಕನಗರ, ಈಜಿಪುರಕ್ಕೆ ಸುಮಾರು ೧೮ ಬಸ್ಸುಗಳು ಸಂಚರಿಸುತ್ತವೆ. ಸಾರ್ವಜನಿಕ ಪ್ರಯಾಣಿಕರು ಸದರಿ ಸಾರಿಗೆ ಸೌಲಭ್ಯವನ್ನು ಪಡೆಯಲು ಕೋರಲಾಗಿದೆ.