* ಬೆಂಗಳೂರು ಕಂಟೊನ್ಮೆಂಟ್ಗೆ ಮದ್ರಾಸ್ನಿಂದ ರೈಲ್ವೆ ಸೇವೆಗಳು ಶುರುವಾಗಿದ್ದು 1864 ರ ಆಗಸ್ಟ್ 1ರಂದು.
* ಮಲ್ಲೇಶ್ವರಂ ವೃತ್ತದಲ್ಲಿರುವ ಕೆ.ಸಿ. ಜನರಲ್ ಆಸ್ಪತ್ರೆ ನಗರದ ಹಳೆಯ ಆಸ್ಪತ್ರೆ. ಇದರಲ್ಲಿರುವ ಕೆ ಸಿ ಎಂದರೆ `ಕೆಂಪು ಚೆಲುವಾಜಮ್ಮಣ್ಣಿ~.
* ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯನವರು ಬಾಲಬ್ರೂಯಿ ಭವನದಲ್ಲಿ ವಾಸವಾಗಿದ್ದರು (ಈಗ ಅದು ಸರ್ಕಾರಿ ಅತಿಥಿಗೃಹ).
* ಬೆಂಗಳೂರು ಷೇರು ವಿನಿಮಯ ಕೇಂದ್ರ ಖಾಸಗಿ ವಲಯದ ಕಂಪೆನಿಯಾಗಿ ಪ್ರಾರಂಭವಾಗಿ ನೊಂದಣಿಯಾಗಿದ್ದು 1957 ರಲ್ಲಿ. ಈಗ ಅದು ದೇಶದ ಅಗ್ರಮಾನ್ಯ ಷೇರು ವಿನಿಮಯ ಕೇಂದ್ರವೆಂಬ ಹೆಗ್ಗಳಿಕೆ ಗಳಿಸಿದೆ.
* ಈಗ ಕಬ್ಬನ್ ರಸ್ತೆಯಲ್ಲಿರುವ ಸೇಂಟ್ ಆ್ಯಂಡ್ರೂಸ್ ಚರ್ಚ್ನ ಹಿಂದಿನ ಹೆಸರು ಸ್ಕಾಟಿಷ್ ಕಿರ್ಕ್. ಬೆಂಗಳೂರಿನಲ್ಲಿದ್ದ ಸ್ಕಾಟಿಷ್ ರೇಜಿಮೆಂಟ್ಗೆ ಸೇರಿದ ಸೈನಿಕರು ಇಲ್ಲಿಗೆ ಬರುತ್ತಿದ್ದರು. ಈ ಚರ್ಚ್ನ ವಾಸ್ತುಶಿಲ್ಪವೂ ಸ್ಕಾಟ್ಲೆಂಡ್ನಲ್ಲಿನ ಚರ್ಚ್ ಮಾದರಿಯಲ್ಲಿದೆ.
* ಕರ್ನಾಟಕ ಪೊಲೀಸ್ ಸಿಐಡಿ ಕೇಂದ್ರ ಕಚೇರಿ ಇರುವ ಕಟ್ಟಡವೇ ವಿಧಾನಸೌಧ ಹಿಂಭಾಗ ಅರಮನೆ ರಸ್ತೆಯಲ್ಲಿರುವ `ಕಾರ್ಲ್ಟನ್ ಹೌಸ್~. ಮಿರ್ಜಾ ಇಸ್ಮಾಯಿಲ್ ಅವರು ದಿವಾನರಾಗಿದ್ದಾಗ ಇಲ್ಲಿ ವಾಸವಿದ್ದರು.