ಬೆಂಗಳೂರು: ನಗರದ ಗಣ್ಯ ವ್ಯಕ್ತಿಗಳ ಭದ್ರತಾ ವಿಭಾಗದಲ್ಲಿ (ವಿವಿಐಪಿ ಸೆಕ್ಯುರಿಟಿ) ಸಬ್ ಇನ್ಸ್ಪೆಕ್ಟರ್ ಆಗಿದ್ದ ವೀರಭದ್ರಯ್ಯ (57) ಎಂಬುವರಿಗೆ ಅವರ ಮಗನೇ ನಿರ್ದಯವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ರಾಜಾಜಿನಗರದ ನವರಂಗ್ ವೃತ್ತದ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ಹಣಕಾಸು ವಿಷಯದಲ್ಲಿನ ಭಿನ್ನಾಭಿಪ್ರಾಯದ ಕಾರಣ ಅವರ ಮಗ ಬಿ.ವಿ.ಯಶವಂತ್ (23) ಎಂಬಾತ ಈ ಕೃತ್ಯ ಎಸಗಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.