ಮೆಕಾರ್ಥಿ ನೀತಿಯನ್ನು ಭಾರತಕ್ಕೆ ತರಲು ಯತ್ನ
ನವದೆಹಲಿ, ಫೆ. 20 - `ರಕ್ಷಣಾ ಸಚಿವ ಶ್ರೀ ವಿ. ಕೆ. ಕೃಷ್ಣಮೆನನ್ ಅವರ ವಿರೋಧಿಗಳು ಭಾರತವನ್ನು ಶೀತಲ ಸಮರಕ್ಕೆ ತಳ್ಳುತ್ತಿರುವರೆಂದೂ ಅಮೇರಿಕಕ್ಕೆ ಬಹಳ ತೊಂದರೆಯುಂಟು ಮಾಡಿದ ಮೆಕಾರ್ಥಿ ನೀತಿಯನ್ನು ಇಲ್ಲಿಯೂ ಅನುಸರಿಸಲು ಯತ್ನಿಸುತ್ತಿರುವರೆಂದೂ ಇದು ಭಾರತವನ್ನು ಹಾಳು ಮಾಡಬಹುದೆಂದೂ ಪ್ರಧಾನಿ ನೆಹರೂ ಅವರು ಇಂದು ಇಲ್ಲಿ ತಿಳಿಸಿದರು.
ಕೃಷ್ಣ ಮೆನನ್ ಅವರನ್ನು ಕಮ್ಯುನಿಸ್ಟ್ ಎಂದು ಕರೆಯುವ ಆಚಾರ್ಯ ಕೃಪಲಾನಿ ಹಾಗೂ ಅವರ ಬೆಂಬಲಿಗರ ಈ ತಂತ್ರ ಸೆನೆಟರ್ ಮೆಕಾರ್ಥಿ ಅವರ ತಂತ್ರದ ಅನುಕರಣೆಯೇ ಸರಿ ಎಂದು ಅವರು ತಿಳಿಸಿದರು.