ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ರೂ 1.75 ಲಕ್ಷ ಕಳವು

Last Updated 14 ಡಿಸೆಂಬರ್ 2012, 6:34 IST
ಅಕ್ಷರ ಗಾತ್ರ

ಮಂಡ್ಯ: ಅಶೋಕನಗರ ಮೊದಲ ಕ್ರಾಸ್‌ನಲ್ಲಿರುವ ಸಹನಾ ಸೇಲ್ಸ್ ಮತ್ತು ಸರ್ವಿಸ್ ಅಂಗಡಿಯಲ್ಲಿ ಗುರುವಾರ ಹಾಡಹಗಲೇ 1.75 ಲಕ್ಷ ರೂಪಾಯಿ ನಗದು ಕಳವು ಮಾಡಿದ ಘಟನೆ ನಡೆದಿದೆ.

ಬ್ಯಾಂಕಿಗೆ ಹಣ ಕಟ್ಟಲು ಅಂಗಡಿ ಮಾಲೀಕ ಪಿ. ಚಂದ್ರಶೇಖರ್ ಅವರು, ಹಣ ಎಣಿಸುತ್ತಿರುವಾಗ ಆಗಮಿಸಿದ ಗ್ರಾಹಕರೊಬ್ಬರು ಟಿವಿ ತೋರಿಸುವಂತೆ ಕೇಳಿದರು. 

ಹಣವನ್ನು ಅಲ್ಲಿಯೇ ಇರುವ ಗಲ್ಲಾಪೆಟ್ಟಿಗೆಯಲ್ಲಿ ಹಾಕಿ ಬೀಗ ಹಾಕದೇ ಟಿವಿ ನೋಡಲು ಹೋದರು. ಐದು ನಿಮಿಷದಲ್ಲಿ ಟಿವಿ ತೋರಿಸಿ ಮರಳಿ ಬಂದು ನೋಡಿದಾಗ ಗಲ್ಲಾ ಪೆಟ್ಟಿಗೆಯಲ್ಲಿದ್ದ 1.75 ಲಕ್ಷ ರೂಪಾಯಿ ಕಾಣೆಯಾಗಿತ್ತು. ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT