ಹಾಸನ: `ಪೋಷಕರು ಮಕ್ಕಳಿಗೆ ವಿದ್ಯಾಭ್ಯಾಸ ದೊಂದಿಗೆ ಸಂಸ್ಕಾರವನ್ನೂ ನೀಡಬೇಕು. ಇದರಿಂದ ಉತ್ತಮ ಪ್ರಜೆಗಳನ್ನು ರೂಪಿಸಿದಂತಾಗುತ್ತದೆ~ ಎಂದು ಅಖಿಲ ಭಾರತ ಆರ್ಯ ವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ. ರವಿಶಂಕರ್ ತಿಳಿಸಿದರು.
ನಗರದ ಕನ್ನಿಕಾಪರಮೇಶ್ವರಿ ದೇವಸ್ಥಾನ ಸಭಾಂ ಗಣದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಘಟಕದ ಆರ್ಯ ವೈಶ್ಯ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಚಿಕ್ಕವಯಸ್ಸಿನಿಂದಲೇ ವಿದ್ಯಾಭ್ಯಾಸದ ಜತೆಗೆ ಸನ್ನಡತೆ ಮೈಗೂಡಿಸಿಕೂಳ್ಳಲು ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಈಚೆಗೆ ಮಕ್ಕಳು ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ದೂಡುತ್ತಿರುವ ಪ್ರಸಂಗ ಹೆಚ್ಚಾಗುತ್ತಿದೆ. ಇದು ಕೆಟ್ಟ ಬೆಳವಣಿಗೆಯಾಗಿದೆ~ ಎಂದರು.
ಆರ್ಯ ಸಮಾಜದಲ್ಲಿ ನಾಯಕತ್ವ ಕೊರತೆ ಇರುವುದನ್ನು ಒಪ್ಪಿಕೂಂಡ ರವಿಶಂಕರ್, `ಅಧಿಕಾರದಲ್ಲಿರುವವರು ಇದನ್ನು ತಿಳಿದು ಸಮಾಜದ ಬೆಳವಣಿಗೆಗೆ ಶ್ರಮಿಸಬೇಕು. ಕಳೆದ ಒಂದೂವರೆ ವರ್ಷದಲ್ಲಿ ಸಮಾಜದ ಉನ್ನತಿಗೆ 1.5 ಕೋಟಿ ರೂಪಾಯಿ ವ್ಯಹಿಸಲಾಗಿದೆ~ ಎಂದರು.
ಆರ್ಯ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್. ರವಿಶಂಕರ್. ಕರ್ನಾಟಕ ಆರ್ಯವೈಶ್ಯ ಮಹಾಸಭಾ ಉಪಾಧ್ಯಕ್ಷ ನಾಗಮಾಣಿಕ್ಯಂ ಶೆಟ್ಟಿ. ಕೋಶಾಧ್ಯಕ್ಷ ಪಿ.ಸಿ. ಬಾಲರಾಜ್. ಯೋಜನಾ ನಿರ್ದೇಶಕ ಎಸ್.ಎ. ವಾಸುದೇವಮೂರ್ತಿ, ಕಾರ್ಯ ದರ್ಶಿ ಎ.ಆರ್. ರವಿಕುಮಾರ್, ಸದಸ್ಯತ್ವ ನೋಂದಾಣಿ ಸಂಚಾಲಕ ದುರ್ಗಪ್ಪ ಶೆಟ್ಟಿ, ಕನ್ನಿಕಾ ಪರಮೇಶ್ವರಿ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಎ.ಜಿ. ವನಜಾರಾಜ್ ಇತರರು ಇದ್ದರು.