ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣು ಸುರಿದು ಬೋರ್‌ವೆಲ್‌ಗೆ ಹಾನಿ

Last Updated 1 ಸೆಪ್ಟೆಂಬರ್ 2013, 20:00 IST
ಅಕ್ಷರ ಗಾತ್ರ

ಮಹದೇವಪುರ:  ಮಹದೇವಪುರ ಕ್ಷೇತ್ರದ ಹಗದೂರು ಗ್ರಾಮದಲ್ಲಿನ ಶ್ರೀರಾಮ ಮಂದಿರದ ಹಿಂದಿನ ರಸ್ತೆಯ ಬದಿಯಲ್ಲಿರುವ ಕುಡಿಯುವ ನೀರಿನ ಬೋರ್‌ವೆಲ್ ಮೇಲೆ ಕಿಡಿಗೆಡಿಗಳು ರಾತ್ರಿ ವೇಳೆ ಮಣ್ಣು ಸುರಿದು ಹೋಗಿದ್ದಾರೆ. ಇದರಿಂದಾಗಿ ಬೋರ್‌ವೆಲ್ ಪೈಪ್ ಮುರಿದು ಹೋಗಿದೆ.

`ಚರಂಡಿ ಮೇಲೂ ಮಣ್ಣು ತುಂಬಿಕೊಂಡಿದೆ. ಇದರಿಂದಾಗಿ ಚರಂಡಿಯಲ್ಲಿನ ಕೊಳಚೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ರಸ್ತೆ ಕೂಡ ಮಣ್ಣುಮಯವಾಗಿದೆ. ಇದರಿಂದಾಗಿ ರಸ್ತೆಯಲ್ಲಿ ಸಾರ್ವಜನಿಕರು ನೆಮ್ಮದಿಯಿಂದ ಓಡಾಡದಂತಾಗಿದೆ' ಸ್ಥಳೀಯ ನಿವಾಸಿ ಸುಬ್ರಹ್ಮಣಿ ಅಳಲು ತೊಡಿಕೊಂಡರು.

`ರಸ್ತೆಗೆ ಹಾಗೂ ಬೋರ್‌ವೆಲ್ ಮೇಲೆ ಮಣ್ಣು ಸುರಿದಿರುವುದನ್ನು ತೆರವುಗೊಳಿಸುವಂತೆ ನಾಲ್ಕು ದಿನಗಳ ಹಿಂದೆಯೇ ವೈಟ್‌ಫೀಲ್ಡ್ ಬಿಬಿಎಂಪಿ ಕಚೇರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಒಂದು ವಾರ ಕಳೆದರೂ ಅಧಿಕಾರಿಗಳು ಮನವಿಗೆ ಸ್ಪಂದಿಸಿಲ್ಲ' ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT