ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ನಾ. ಡಿಸೋಜ ಅವರು ಸಮಸ್ತ ಮಲೆನಾಡಿಗರ ‘ನಾಡಿ’ಯಂತಿದ್ದಾರೆ.
ಯಾವುದೇ ಗುಂಪಿಗೆ ಸೇರದ ನಿಗರ್ವಿ ಸಮ್ಮೇಳನಾಧ್ಯಕ್ಷರಾಗಿರುವುದು ನಮಗೆ ಹೆಮ್ಮೆಯ ವಿಷಯ. ಉತ್ತಮ ಲೇಖಕರು ಮಾತ್ರವಲ್ಲದೇ ಅಂತಃಕರಣ ಉಳ್ಳ ಡಿಸೋಜ ಅವರ ನೇತೃತ್ವದ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಲಿ ಎಂದು ಆಶಿಸುತ್ತೇವೆ.