ಹುಬ್ಬಳ್ಳಿಗೆ ಬಂದದ್ದು ಸಂತಸ ತಂದಿದೆ. ಅದರಲ್ಲೂ ಮೂರು ಸಾವಿರ ಮಠದ 200 ಅಡಿ ಎತ್ತರದ ಮಹಾದ್ವಾರ ಏರಬೇಕೆಂಬ ಆಸೆ ಇತ್ತು. ಗಡಿಯಾರ ಹತ್ತಿರ ಹೋದಾಗ ಸ್ವಲ್ಪ ಕಷ್ಟ ಎನಿಸಿತು. ಯಶಸ್ವಿಯಾಗಿ ಮಹಾದ್ವಾರ ಏರಿದ್ದು ಖುಷಿ ಕೊಟ್ಟಿದೆ. ಪ್ರತಿಭೆ ಇದ್ದರೆ ಪ್ರೋತ್ಸಾಹ ಸಿಕ್ಕೇ ಸಿಗುತ್ತದೆ. ಹುಬ್ಬಳ್ಳಿ ಜನ ತುಂಬಾ ಪ್ರೋತ್ಸಾಹ ನೀಡಿದರು. 2020ರ ವೇಳೆಗೆ ಒಲಿಂಪಿಕ್ಸ್ನಲ್ಲಿ ಭಾಗವಹಿಸುವ ಗುರಿ ಹೊಂದಿದ್ದೇನೆ. ಇದಕ್ಕಾಗಿಯೇ ಒಂದು ತಂಡವನ್ನು ತಯಾರು ಮಾಡುತ್ತಿದ್ದೇನೆ. ಇದಕ್ಕೆ ಆರ್ಥಿಕ ನೆರವು ಸಿಕ್ಕರೆ ಸಹಾಯವಾಗುತ್ತದೆ.
–ಜ್ಯೋತಿರಾಜ (ಕೋತಿರಾಜ)