ಉಡುಪಿ: ರಾಜ್ಯದಲ್ಲಿ ಸದ್ಯ 3 ಸಾವಿರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ನೇಮಕ ಪ್ರಕ್ರಿಯೆ ನಡೆದಿದ್ದು, ಶೀಘ್ರವೇ ಹುದ್ದೆ ಭರ್ತಿಯಾಗಲಿವೆ ಎಂದು ಗೃಹ ಸಚಿವ ಆರ್. ಅಶೋಕ್ ಇಲ್ಲಿ ಹೇಳಿದರು.
ಮಣಿಪಾಲದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಪ್ರಾದೇಶಿಕ ಸಾರಿಗೆ ಕಚೇರಿ, ನೂತನ ಜಿಲ್ಲಾ ಕಚೇರಿ ಸಂಕೀರ್ಣವನ್ನು ಗುರುವಾರ ಬೆಳಿಗ್ಗೆ ಪರಿಶೀಲಿಸಿದ ಅವರು ಪತ್ರಕರ್ತರ ಜತೆ ಮಾತನಾಡಿ, ಪ್ರತಿ ವರ್ಷ ರಾಜ್ಯದಲ್ಲಿ 18ರಿಂದ 19 ಸಾವಿರ ಪೊಲೀಸ್ ಹುದ್ದೆ ಖಾಲಿ ಉಳಿಯುತ್ತಲೇ ಇವೆ. ಸರ್ಕಾರದ ನೇಮಕಾತಿ ನೀತಿಯಲ್ಲಿಯೂ ಬದಲಾವಣೆ ಆಗಬೇಕಿದೆ ಎಂದರು.