ಮೈಸೂರು: ಯದುವಂಶ ತಿಲಕ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವ ಹಾಗೂ ವೈದಿಕ ವಿಧಿ ವಿಧಾನಗಳೊಂದಿಗೆ ಇಲ್ಲಿನ ಮಧುವನದಲ್ಲಿ ಮಂಗಳವಾರ ಸಂಜೆ ನೇರವೇರಿತು.
ವೈದಿಕ ಮತ್ತು ರಾಜ ವಂಶಸ್ಥರ ಸಂಪ್ರದಾಯದಂತೆ ಅಂತಿಮ ವಿಧಾನಗಳನ್ನು ನಡೆಸಲಾಯಿತು. ಚಿತೆಗೆ ಶ್ರೀಗಂಧದ ಕಟ್ಟಿಗೆ ಮತ್ತು ತುಪ್ಪ ಹಾಗೂ ಸುಗಂಧ ದ್ರವ್ಯಗಳನ್ನು ಬಳಸಲಾಯಿತು.