ನವದೆಹಲಿ/ವಾರಾಣಸಿ: ‘ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಿಯಾಂಕಾ ನನ್ನ ಮಗಳಂತೆ ಎಂದು ನರೇಂದ್ರ ಮೋದಿ ಹೇಳಿಲ್ಲ. ಈ ಸಂದರ್ಶನವನ್ನು ತಿರುಚಿ ಪ್ರಸಾರ ಮಾಡಲಾಗಿದೆ’ ಎಂದು ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ಶುಕ್ರವಾರ ಹೇಳಿದ್ದಾರೆ.
ವಾರಾಣಸಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಯಾರ ಒತ್ತಡದ ಮೇಲೆ ಸಂದರ್ಶನದ ಕೆಲವು ಭಾಗವನ್ನು ತಿರುಚಲಾಗಿದೆ ಎನ್ನುವುದರ ತನಿಖೆಗೆ ಆದೇಶ ನೀಡಬೇಕು’ ಎಂದು ಆಗ್ರಹಿಸಿದರು.
ಈ ನಡುವೆ, ಗುಜರಾತ್್ ಮುಖ್ಯಮಂತ್ರಿ ನರೇಂದ್ರ ಮೋದಿ ಕಚೇರಿಯು, ಸಂದರ್ಶನದ ಪೂರ್ಣ ಪಾಠ ಬಿಡುಗಡೆ ಮಾಡಿದೆ. ‘ಸಂದರ್ಶನದ ಯಾವ ಭಾಗವನ್ನೂ ಉದ್ದೇಶಪೂರ್ವಕವಾಗಿ ಪರಿಷ್ಕರಿಸಿಲ್ಲ ಅಥವಾ ಕತ್ತರಿ ಹಾಕಿಲ್ಲ’ ಎಂದು ಡಿಡಿ ಸುದ್ದಿವಾಹಿನಿ ನಿರ್ದೇಶಕ ಎಸ್.ಎಂ.ಖಾನ್್ ಹೇಳಿಕೆ ನೀಡಿದ ಬಳಿಕ ಮೋದಿ ಈ ಸಂದರ್ಶನದ ಪೂರ್ಣ ಪಾಠ ಬಿಡುಗಡೆ ಮಾಡಲು ನಿರ್ಧರಿಸಿದರು.
‘ಸರ್ಕಾರ ಒತ್ತಡದ ಮೇರೆಗೆ ಈ ಸಂದರ್ಶನದ ಕೆಲವು ಭಾಗವನ್ನು ತಿರುಚಲಾಗಿದೆ’ ಎಂದು ಬಿಜೆಪಿ ಆರೋಪಿಸಿದೆ.