ಮೊದಲ ಟೂರ್ನಿ ಕುರಿತು ಪಾನ್ ಇಂಡಿಯಾ ನೆಟ್ವರ್ಕ್ ಲಿಮಿಟೆಡ್ನ ಮಾರ್ಕೆಟಿಂಗ್ ಮುಖ್ಯಸ್ಥ ಗೌತಮ್ ಥವಾನಿ ಮಾತನಾಡಿ, `ಡಬ್ಲ್ಯೂಆರ್ಟಿ ರಮ್ಮಿ ಆಟಗಾರರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸುವ ವಿನೂತನ ವೇದಿಕೆಯಾಗಿದ್ದು, ಒಂದು ಕೋಟಿಗೂ ಅಧಿಕ ಮೌಲ್ಯದ ಬಹುಮಾನಗಳನ್ನು ಗೆಲ್ಲಬಹುದಾಗಿದೆ. ಇಂದು ಪಾನ್ ಇಂಡಿಯಾ ನೆಟ್ವರ್ಕ್ನಲ್ಲಿ ಬೆಂಗಳೂರಿನ ವಿಜೇತರನ್ನು ಅಂತಿಮ ಸುತ್ತಿಗೆ ಪ್ರವೇಶಿಸಲು ಅರ್ಹರೆಂದು ಪ್ರಕಟಿಸಲು ಹೆಮ್ಮೆ ಪಡುತ್ತೇವೆ. ಇಲ್ಲಿ ಸಿಕ್ಕ ಉತ್ತಮ ಪ್ರತಿಕ್ರಿಯೆಯಿಂದ ಉತ್ತೇಜಿತರಾಗಿ ಟೂರ್ನಿಯ ದ್ವಿತೀಯ ಸುತ್ತನ್ನು ಇದೇ ತಿಂಗಳಲ್ಲಿ ನಡೆಸಲಾಗುವುದು~ ಎಂದರು.