ಡಿಕ್ಕಿ ಹೊಡೆದ ಜೀಪ್ ನಿಲ್ಲಿಸದೇ ಹೋರಟು ಹೋಯಿತು. ರಸ್ತೆಯಲ್ಲಿ ಶವ ಬಿದ್ದಿತ್ತು. ವಿಷಯ ತಿಳಿದ ಮೃತನ ಸಂಬಂಧಿಕರು ಹಾಗೂ ಗ್ರಾಮಸ್ಥರು ರಸ್ತೆ ತಡೆ ನಡೆಸಿದರು. ಇದರಿಂದ ಸಂಚಾರ ಅಸ್ತವ್ಯಸ್ತಗೊಂಡಿತು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಉನ್ನತ ಅಧಿಕಾರಿಗಳು ಮೃತರ ಸಂಬಂಧಿಕರ ಮನವೊಲಿಸಿ ಮಾತುಕತೆಗೆ ನಂಜನಗೂಡು ಡಿವೈಎಸ್ಪಿ ಕಚೇರಿಗೆ ಕರೆದೊಯ್ದರು. ನಂತರ ರಾತ್ರಿ 8.30ರ ಸುಮಾರಿಗೆ ಸಂಚಾರ ಸುಗಮಗೊಂಡಿತು. ಪೊಲೀಸ್ ಜೀಪ್ನ್ನು ವಶಕ್ಕೆ ಪಡೆದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.