ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಲ್ ಎಸ್ಟೇಟ್ ಉದ್ಯಮಿಯ ಬಂಧನ

Last Updated 20 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಜಲಮಂಡಲಿಯಿಂದ ಕಾವೇರಿ ನೀರಿನ ಸೌಲಭ್ಯ ಒದಗಿಸಲಾಗುವುದು ಎಂದು ನಂಬಿಸಿ  ಕರಪತ್ರ ಹಂಚಿದ ಆರೋಪದ ಮೇಲೆ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ.

ಸಾರ್ವಜನಿಕರ ದೂರಿನ ಮೇರೆಗೆ ಜಲಮಂಡಲಿ ಪೂರ್ವ ವಲಯದ ಐದನೇ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಮುರಳಿ ಅವರು ದೇವಿ ರಿಯಲ್ ಎಸ್ಟೇಟ್ ಸಂಸ್ಥೆಯ ಬಾಲಾಜಿ ಎಂಬುವವರ ವಿರುದ್ಧ ನಗರದ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

`ಬೆಂಗಳೂರು ಜಲಮಂಡಲಿಯಿಂದ ಕಾವೇರಿ ನೀರಿನ ಸೌಲಭ್ಯವನ್ನು ವಿಜ್ಞಾನನಗರದಲ್ಲಿ ಸಂಸ್ಥೆ ಒದಗಿಸಲಿದೆ, ನೀರಿನ ಸಂಪರ್ಕ ಬಯಸುವವರು ಸಂಬಂಧಪಟ್ಟ ದಾಖಲೆಗಳನ್ನು ತಮ್ಮ ಕಚೇರಿಗೆ ಸಲ್ಲಿಸಬೇಕು ಎಂಬ ಕರಪತ್ರಗಳನ್ನು ಬಾಲಾಜಿ ಹೊರಡಿಸಿದ್ದರು. ನೀರು ಸರಬರಾಜು ಮಾಡುವುದಾಗಿ ನಂಬಿಸಿ ಸಾರ್ವಜನಿಕರಿಂದ ತಲಾ ರೂ 2500 ರೂಪಾಯಿ ಹಣವನ್ನು ಈತ ವಸೂಲಿ ಮಾಡುತ್ತಿದ್ದರು~ ಎಂದು ಪೊಲೀಸರು ತಿಳಿಸಿದ್ದಾರೆ. 

 ಕರಪತ್ರದಲ್ಲಿ ಶಾಸಕ ನಂದೀಶ್ ರೆಡ್ಡಿ ಮತ್ತು ವಿಜ್ಞಾನನಗರ ಪಾಲಿಕೆ ಸದಸ್ಯೆ ಗೀತಾ ವಿವೇಕಾನಂದ ಅವರ ಭಾವಚಿತ್ರಗಳನ್ನು ಮುದ್ರಿಸಲಾಗಿತ್ತು.

ಈ ಬಗ್ಗೆ `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿರುವ ಗೀತಾ, `ಜಲಮಂಡಲಿ ಗುತ್ತಿಗೆದಾರರ ಸಂಘ ಅನುಮತಿ ನೀಡಿದೆ ಎಂದು ಹೇಳಿಕೊಂಡು ಬಾಲಾಜಿ ಎಂಬುವವರು ನಮ್ಮನ್ನು ಸಂಪರ್ಕಿಸಿದರು. ಆದರೆ ಅವರ ಬಳಿ ಕಾರ್ಯಾದೇಶ ಪತ್ರ ಇರಲಿಲ್ಲ. ಇದರಿಂದ ಅನುಮಾನ ಬಂದು ಪರಿಶೀಲಿಸಿದಾಗ ಅದು ವಂಚನೆ ಎಂದು ತಿಳಿಯಿತು. ಕರಪತ್ರದಲ್ಲಿ ಭಾವಚಿತ್ರ ಮುದ್ರಿಸಿರುವ ಬಗ್ಗೆ ನಮಗೆ ಗೊತ್ತಿರಲಿಲ್ಲ. ಕೂಡಲೇ ಕರಪತ್ರಗಳನ್ನು ಹಂಚದಂತೆ ಆತನಿಗೆ ಸೂಚಿಸಲಾಯಿತು~ ಎಂದು ಹೇಳಿದ್ದಾರೆ. ಬಾಲಾಜಿ ಅವರು ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.

ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಜಲಮಂಡಲಿ ಅಧಿಕಾರಿಗಳು, `ಖಾಸಗಿ ವ್ಯಕ್ತಿಗಳಿಗೆ ಹಣ ಸಂಗ್ರಹಿಸುವ ಅಧಿಕಾರ ನೀಡಿಲ್ಲ. ಹೊಸದಾಗಿ ನೀರಿನ ಸಂಪರ್ಕ ಪಡೆಯುವಾಗ ಜಲಮಂಡಲಿಯ ಸಮೀಪದ ಕಛೇರಿಗಳನ್ನು ಸಂಪರ್ಕಿಸಿ ಅಧಿಕೃತವಾಗಿ ನಿಗದಿ ಪಡಿಸಿದ ಶುಲ್ಕವನ್ನು ಮಾತ್ರ ಸಾರ್ವಜನಿಕರು ಪಾವತಿ ಮಾಡಬೇಕು~ ಎಂದು ಕೋರಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT