ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, `ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆದಿರುವ ರೆಡ್ಡಿ ಸಹೋದರರ ಬಗ್ಗೆ ಪ್ರಜ್ಞಾವಂತ ಮತದಾರರಿಗೆ ಅರಿವಿದೆ. ಒಂದೊಮ್ಮೆ ಜನಾರ್ದನ ರೆಡ್ಡಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಖಂಡಿತ ಅವರ ವಿರುದ್ಧ ಸ್ಪರ್ಧೆಗಿಳಿದು, ಜನರಿಗೆ ಅವರ ಕುಕೃತ್ಯಗಳ ಬಗ್ಗೆ ಜಾಗೃತಿ ಮೂಡಿಸಿ, ಭ್ರಷ್ಟರನ್ನು ತಿರಸ್ಕರಿಸುವಂತೆ ಕೋರುವೆ' ಎಂದರು.