ಈ ನಿರ್ಧಾರವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಕಿಲ್ ಖುರೇಶಿತಳ್ಳಿಹಾಕಿದ್ದಾರೆ. ಅನೇಕ ವರ್ಷಗಳಿಂದ ಲೋಕಾಯುಕ್ತ ಹುದ್ದೆ ಖಾಲಿ ಇದ್ದು, ಇದು ಸರಿಯಲ್ಲ ಎಂದು ಖುರೇಷಿ ಅಭಿಪ್ರಾಯಪಟ್ಟರು. ಆದರೆ, ಇದಕ್ಕೆ ಒಪ್ಪದ ಮತ್ತೊಬ್ಬ ನ್ಯಾಯಮೂರ್ತಿ ಸೋನಿಯಾ ಗೋಕಾನಿ, ಇದಕ್ಕೆ ತಮ್ಮ ಸಂಪೂರ್ಣ ಸಮ್ಮತಿ ಇಲ್ಲ ಎಂದರು. ಅವರು ತಮ್ಮ ಆದೇಶದ ಪ್ರತಿಯನ್ನು ಓದಲು ಆರಂಭಿಸುತ್ತಿದ್ದಂತೆಯೇ ನ್ಯಾಯಾಲಯ ಕಲಾಪದ ವೇಳೆ ಮುಗಿಯಿತು. ಹೀಗಾಗಿ ಆದೇಶದ ಪೂರ್ಣಪಾಠ ಮಂಗಳವಾರ ಲಭ್ಯವಾಗಲಿದೆ.