ಕೋಲ್ಕತ್ತ (ಐಎಎನ್ಎಸ್): ದೇಶದ ಒಟ್ಟು ತೆರಿಗೆ ವರಮಾನ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ, ವಿತ್ತೀಯ ಕೊರತೆ ಅಂತರ ಹೆಚ್ಚಿದೆ. ಆದರೆ, ಇದು ನಿರ್ವಹಿಸಬಹುದಾದ ಮಿತಿಯಲ್ಲಿದ್ದು, ಯಾವುದೇ ಅಪಾಯ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.
ವಿತ್ತೀಯ ಕೊರತೆ ಅಂತರವು ದೇಶದ ಆರ್ಥಿಕ ವೃದ್ಧಿ ದರದ (ಜಿಡಿಪಿ) ಶೇ 4.6ರಷ್ಟು ಪಾಲನ್ನು ಮೀರಲಿದೆ ಎನ್ನುವ ವರದಿಯನ್ನು ಅಲ್ಲಗಳೆದ ಪ್ರಣವ್, ಅಂತಹ ಯಾವುದೇ ಸನ್ನಿವೇಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.