ಹೊಸಪೇಟೆ: ಧಾರವಾಡದ ಸರ್ವೇಶ್ ಮನ್ವಾಚಾರ್ ಹಾಗೂ ಸೃಷ್ಟಿ ಕುಲಕರ್ಣಿ ದಕ್ಷಿಣ ಕಾಶಿ ಎಂದೇ ಖ್ಯಾತವಾದ ಹಂಪಿಯ ವಿರೂಪಾಕ್ಷನ ಸನ್ನಿದಿಯಲ್ಲಿ ಭರತನಾಟ್ಯ ಪ್ರದರ್ಶಿಸುವ ಮೂಲಕ ತಮ್ಮ ಹರಕೆಯ ಮೂರನೆ ಪ್ರದರ್ಶನ ತೀರಿಸಿದರು.
ಈಗಾಗಲೇ ಇಡಗುಂಜಿ ಬಾದಾಮಿ- ಬನಶಂಕರಿಯಲ್ಲಿ ಸೇವೆ ಮುಗಿಸಿರುವ ಇವರು ಮಂಗಳವಾರ ರಾತ್ರಿ ಹಂಪಿಯಲ್ಲಿ ಸೇವೆ ಮಾಡಿದರು.ನಂತರ ಶೃಂಗೇರಿ ಹಾಗೂ ಮೈಸೂರಿನ ಜಾಮುಂಡೇಶ್ವರಿಯ ಮುಂದೆ ನಾಟ್ಯ ಸೇವೆ ಸಲ್ಲಿಸುವ ಮೂಲಕ ನಾಟ್ಯರಂಗ ಪ್ರವೇಶ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಹಂಪಿ ವಿರೂಪಾಕ್ಷ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಮಹೇಶ ನಮ್ಮ ಸಾಂಪ್ರದಾಯಿಕ ಕಲಾ ಸೇವೆಯನ್ನು ಮುಂದುವರೆಸುವ ಕಾಯಕ ಯುವ ಪೀಳಿಗೆಯಿಂದಾಗ ಬೇಕು ಇಂತಹ ಕಾರ್ಯ ನಿರ್ವಹಿಸಿದ ಇವರ ಸೇವೆ ಅನುಕರಣೀಯ ಎಂದರು.