ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ನೇಮಕಾತಿ ಪರೀಕ್ಷೆ ಉತ್ತರಗಳನ್ನು ಸರಿಪಡಿಸಿ

Last Updated 18 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಸರ್ಕಾರಿ ಪ್ರೌಢಶಾಲೆಗಳಲ್ಲಿ ಸಹಶಿಕ್ಷಕರ ನೇಮಕಾತಿಗಾಗಿ ಶಿಕ್ಷಣ ಇಲಾಖೆಯು ಜುಲೈ ತಿಂಗಳಲ್ಲಿ ನೇಮಕಾತಿ ಪರೀಕ್ಷೆ ನಡೆಸಿ, ವಿಷಯವಾರು ಸರಿ ಉತ್ತರಗಳನ್ನು ಪ್ರಕಟಿಸಿತು. ಅದರಲ್ಲಿಯ ಹಲವಾರು ದೋಷಗಳ ಕುರಿತಂತೆ ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಿದ್ದರೂ. ಆದರೆ `ಪರಿಷ್ಕೃತ ಸರಿಉತ್ತರ ಪಟ್ಟಿ~ಯಲ್ಲಿಯೂ ಕೆಲವೊಂದು ದೋಷಗಳು ಹಾಗೆಯೇ ಉಳಿದಿವೆ.

ಕನ್ನಡ ಭಾಷಾ ಪತ್ರಿಕೆಯಲ್ಲಿ  `ಅಗಸ~  ಪದದ ಸ್ತ್ರೀವಾಚಕ ರೂಪ  `ಅಗಸಿತಿ~  ಎಂದು ಪ್ರಕಟಿಸಿದ್ದಾರೆ. ಆದರೆ ಖ್ಯಾತ ವಿದ್ವಾಂಸರಾದ ತೀ.ನಂ.ಶ್ರಿಕಂಠಯ್ಯನವರು  ಕನ್ನಡ ಮಧ್ಯಮ ವ್ಯಾಕರಣ  (ಮುದ್ರಣ-2008 ಪು.ಸಂ.- 33)ದಲ್ಲಿ  `ಅಗಸಗಿತ್ತಿ~  ಎಂದು ಹೇಳಿದ್ದಾರೆ.
 
ಹಾಗೆಯೇ  ಅರ್ಥ ಶ್ಲೇಷೆ ಅಲಂಕಾರ  ಎಂದರೆ ಒಂದೇ ಪದಕ್ಕೆ ನಾಲ್ಕಾರು ಅರ್ಥಗಳು ಹೊರಡುವಂತೆ ಹೇಳುವುದು ಎಂಬ ಉತ್ತರವೂ ಸರಿಯಾಗಿದೆ (10ನೇ ತರಗತಿ ಕನ್ನಡ ಪಠ್ಯ ಪುಸ್ತಕದ ಪ್ರಕಾರ). ಕಾರಣ ಈ ದೋಷಗಳನ್ನು ಸರಿಪಡಿಸಿ ಆಯ್ಕೆ ಪಟ್ಟಿ ಪ್ರಕಟಿಸಬೇಕೆಂಬುದು ನಿರುದ್ಯೋಗಿ ಶಿಕ್ಷಕರ ಆಶಯವಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT