ಶಿರಹಟ್ಟಿ (ಗದಗ ಜಿಲ್ಲೆ): ತಾಲ್ಲೂಕಿನ ಕುಸಲಾಪುರ, ಮಜ್ಜೂರು, ಮಜ್ಜೂರು ತಾಂಡಾ, ಜಲ್ಲಿಗೇರಿ, ವರವಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕೆಲವು ದಿನಗಳಿಂದ ಚಿರತೆಗಳ ಹಾವಳಿಯಿಂದ ಗ್ರಾಮಸ್ಥರು ಭಯದ ನೆರಳಲ್ಲಿ ಬದುಕುವಂತಾಗಿದೆ.
4 ಆಕಳು, 2 ನಾಯಿ ಮತ್ತು 3 ಆಡುಗಳ ಮಾಂಸದ ರುಚಿಯನ್ನು ಕಂಡಿರುವ ಚಿರತೆಗಳ ಭಯದಿಂದ ಹೊಲಗಳಿಗೂ ಹೋಗಲು ಜನತೆ ಅಂಜುವಂತಾಗಿದೆ ಎಂದು ಮಜ್ಜೂರು ಗ್ರಾಮಸ್ಥರು `ಪ್ರಜಾವಾಣಿ~ಗೆ ತಿಳಿಸಿದರು.
ಅರಣ್ಯ ಸಿಬ್ಬಂದಿನಿರ್ಲಕ್ಷ್ಯ: ಚಿರತೆ ಹಾವಳಿ ಕುರಿತು ಅರಣ್ಯ ಇಲಾಖೆಯ ಗಮಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕಾಟಾಚಾರಕ್ಕೆ ಆ ಪ್ರದೇಶದಲ್ಲಿ ಒಂದು ಸುತ್ತು ಹಾಕಿ ಕರ್ತವ್ಯ ಮುಗಿಯಿತು ಎಂಬಂತೆ ವರ್ತಿಸುತ್ತಾರೆ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಬಾಷಾಸಾಬ್ ಜಂಗಳಿ ಹೇಳಿದರು.