ಹಗದೂರಿನಲ್ಲಿರುವ ಸರ್ವ ಸಿದ್ದಿ ವಿನಾಯಕನ ದೇವಾಲಯದಿಂದಲೇ ಈ ಬಡಾವಣೆಯು ವಿನಾಯಕ ನಗರವೆಂದು ಹೆಸರಾಯಿತು.ಬೆಂಗಳೂರು ಪೂರ್ವ ತಾಲ್ಲೂಕಿನ ಹಗದೂರು ವಿನಾಯಕನ ದೇಗುಲವನ್ನು ಸ್ಥಳೀಯರು ಕೇವಲ ಪೂಜೆಗೆ ಸೀಮಿತವಾಗಿಲ್ಲ.
ಸಾಂಸ್ಕೃತಿಕ ಚಟುವಟಿಕೆಯ ತಾಣವಾಗಿದೆ. ಊರ ಮುಂಖಂಡ ಪಿ.ಟಿ. ಅಪ್ಪಾಜಿ ಗೌಡರ ಮುಂದಾಳತ್ವದಲ್ಲಿ ವಿನಾಯಕನ ಆಲಯದ ಆವರಣದಲ್ಲಿ ಪ್ರತಿವರ್ಷ ಶಿವರಾತ್ರಿಯಂದು ನಾಡಿನ ಪ್ರಸಿದ್ಧ ಕಲಾವಿದರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಈಗ ಗಣೇಶನ ಗುಡಿಯ ಮಹಾದ್ವಾರದಲ್ಲಿ ಧ್ಯಾನ ಮಗ್ನ ಶಿವನ 21 ಅಡಿ ಪ್ರತಿಮೆ ಪ್ರತಿಷ್ಠಾಪನೆಯಾಗಿದೆ. ಬೆಂಗಳೂರು ಪೂರ್ವ ತಾಲ್ಲೂಕಿನಲ್ಲಿ ಅತಿ ಎತ್ತರದ ಶಿವ ಪ್ರತಿಮೆಗಳಲ್ಲಿ ಇದೂ ಒಂದು.