ಖ್ರುಶ್ಚೋವ್ ವಿಷಾದ
ಮಾಸ್ಕೊ, ಫೆ. 23 - ಜಿನೀವಾದಲ್ಲಿ 18 ರಾಷ್ಟ್ರಗಳ ನಿಶ್ಯಸ್ತ್ರೀಕರಣ ಸಮ್ಮೇಳನದಲ್ಲಿ ಭಾಗವಹಿಸುವಂತೆ ಸೋವಿಯತ್ ಸರ್ಕಾರದ ಸಲಹೆಯನ್ನು ಅಧ್ಯಕ್ಷ ಕೆನಡಿ ಹಾಗೂ ಪ್ರಧಾನಿ ಮ್ಯಾಕ್ಮಿಲನ್ ತಿರಸ್ಕರಿಸಿರುವ ಬಗ್ಗೆ ಖ್ರುಶ್ಚೋವ್ ವಿಷಾದ ವ್ಯಕ್ತಪಡಿಸಿದರು.
ತೀವ್ರ ಪೈಪೋಟಿ
ಚಿಂತಾಮಣಿ, ಫೆ. 23 - ವರ್ಣರಂಜಿತ ಭಿತ್ತಿ ಪತ್ರಗಳಲ್ಲಿ ಕಾಣಿಸಿಕೊಳ್ಳುವ ಪ್ರಧಾನಿ ನೆಹರೂ, ಒಬ್ಬರು ಆನೆ, ಮತ್ತೊಬ್ಬರು ಜೋಡೆತ್ತು ಸಂಕೇತವುಳ್ಳ ಉಭಯ ಉಮೇದುವಾರರಿಗೂ ವೋಟು ಬೇಡುತ್ತಿದ್ದಾರೆ. ಕೋಲಾರ ಜಿಲ್ಲೆಯ ಚಿಂತಾಮಣಿ ಕ್ಷೇತ್ರದಲ್ಲಿ ಈ `ವಿಚಿತ್ರ~ ಪರಿಸ್ಥಿತಿ ಇದೆ.