ಬೆಂಗಳೂರು: ವಿಧಾನಸಭೆಯ ಸಚಿವಾಲಯದಲ್ಲಿ ದಲಾಯತ್/ ಕಾವಲುಗಾರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆರಂಭಿಸಿದ್ದ ಮೌಖಿಕ ಸಂದರ್ಶನವನ್ನು ಮುಂದೂಡಲಾಗಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ. ಏ.3ರಿಂದ ಆರಂಭವಾಗಿದ್ದ ಸಂದರ್ಶನ 6ರವರೆಗೆ ನಿಗದಿಯಾಗಿತ್ತು. ಮುಖ್ಯ ಚುನಾವಣಾಧಿಕಾರಿಗಳ ಸೂಚನೆಯಂತೆ ಸಂದರ್ಶನ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ತಿಳಿಸಲಾಗಿದೆ.