ಪ್ರಿಯದರ್ಶಿನಿ ಪ್ರಕಾಶನ ಆಯೋಜನೆಯಲ್ಲಿ ಡಾ.ಎಂ.ಚಿದಾನಂದ ಮೂರ್ತಿ ಅವರ `ಸಂಶೋಧನೆ: ಪಾಂಡಿತ್ಯರಸ~ ಕೃತಿ ಗುರುವಾರ ಲೋಕಾರ್ಪಣೆಯಾಗಲಿದೆ. ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಬಸವರಾಜ ಕಲ್ಗುಡಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಡಾ.ಎಸ್.ವಿದ್ಯಾಶಂಕರ ಅವರು ಸಂಪಾದಿಸಿರುವ ಮಹಾಕವಿ ಷಡಕ್ಷರದೇವನ ಮೂರು ಚಂಪೂ ಕೃತಿಗಳಾದ `ರಾಜಶೇಖರ ವಿಳಾಸ~, `ಬಸವರಾಜ ವಿಜಯ~, `ಶಬರ ಶಂಖರವಿಳಾಸ~ ಕೃತಿಗಳನ್ನು ಕವಿ ಜಿ.ಎಸ್.ಸಿದ್ಧಲಿಂಗಯ್ಯ ಅವರು ಲೋಕಾರ್ಪಣೆಗೊಳಿಸಲಿದ್ದಾರೆ.
ಸಂಶೋಧನೆ: ಪಾಂಡಿತ್ಯರಸ- ಮುಖ್ಯವಾಗಿ ಯುವ ಸಂಶೋಧಕರನ್ನು ಗಮನದಲ್ಲಿಟ್ಟುಕೊಂಡು ಈ ಕೃತಿ ರಚಿಸಲಾಗಿದೆ. ಪಿಎಚ್.ಡಿ ಪದವಿಗಾಗಿ ಕೆಲಸ ಮಾಡುವವರು ವಿಷಯದ ಆಯ್ಕೆ, ಆರಂಭದಲ್ಲಿ ಕೈಗೊಳ್ಳಬೇಕಾದ ಶ್ರಮಪೂರ್ಣ ಕಾರ್ಯ, ಟಿಪ್ಪಣಿ, ಬರವಣಿಗೆಗೆ ವಹಿಸಬೇಕಾದ ಎಚ್ಚರ, ಊಹೆ-ಪ್ರಮೇಯ-ಸಿದ್ಧಾಂತ ಇವುಗಳ ಕುರಿತು ಸಮಗ್ರವಾಗಿ ಕಟ್ಟಿಕೊಡಲಾಗಿದೆ.
ಮಹಾಕವಿ ಷಡಕ್ಷರದೇವನ ಮೂರು ಚಂಪೂ ಕೃತಿಗಳು- ಮಹಾಕವಿಯೊಬ್ಬರ ಮೂರು ಕೃತಿಗಳು ಏಕಕಾಲಕ್ಕೆ ಪ್ರಕಟವಾಗುತ್ತಿರುವುದು ಸಾಹಿತ್ಯಲೋಕದ ಪ್ರಕಟಣಾ ವಿಶೇಷ.
ಸ್ಥಳ: ಪ್ರೆಸ್ಕ್ಲಬ್ ಸಭಾಂಗಣ, ಕಬ್ಬನ್ ಪಾರ್ಕ್. ಬೆಳಿಗ್ಗೆ 11.