ಬೆಂಗಳೂರು: `ಕರಕುಶಲ ಹಾಗೂ ಸಂಸ್ಕೃತಿ ಗ್ರಾಮದ ಪರಿಕಲ್ಪನೆ ಭಾರತದಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಸಹಾಯಕವಾಗುತ್ತದೆ~ ಎಂದು ಕೇಂದ್ರ ಸಚಿವ ಸುಬೋದ್ ಕಾಂತ ಸಹಾಯ್ ಹೇಳಿದರು.
ಬಿಡದಿಯಲ್ಲಿ ಇನ್ನೋವೇಟಿವ್ ಫಿಲಂ ಸಿಟಿಯ ಕರಕುಶಲ ಹಾಗೂ ಸಾಂಸ್ಕೃತಿಕ ಗ್ರಾಮದಲ್ಲಿ ಕೇರಳ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, `ಇನ್ನೋವೇಟಿವ್ ಫಿಲಂ ಸಿಟಿಯು ದೇಶದ ಪ್ರಮುಖ ಮನರಂಜನಾ ಸ್ಥಳವಾಗಿದೆ. ಇಂತಹ ಮೇಳ ಹಾಗೂ ಹಬ್ಬಗಳು ರಾಜ್ಯದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಮೌಲ್ಯಗಳನ್ನು ಒದಗಿಸುತ್ತದೆ~ ಎಂದರು.
ಐಎಫ್ಸಿಯ ಸರವಣ ಪ್ರಸಾದ್ ಮಾತನಾಡಿ, `ಕೇರಳದ ಶ್ರೀಮಂತಿಕೆಯ ಪ್ರದರ್ಶನ ಹಾಗೂ ಜನರಿಗೆ ಕೇರಳ ರಾಜ್ಯದ ಸಂಸ್ಕೃತಿ ಹಾಗೂ ಮೌಲ್ಯಗಳ ಬಗ್ಗೆ ಶಿಕ್ಷಿತರನ್ನಾಗಿಸುವುದು ಈ ಮೇಳದ ಉದ್ದೇಶವಾಗಿದೆ~ ಎಂದು ವಿವರಿಸಿದರು. ಈ ಮೇಳವು ಅ. 9 ರ ವರೆಗೂ ನಡೆಯಲಿದೆ.