ಇದೀಗ ಜರ್ದಾರಿ ಅವರ ಕ್ರಮವನ್ನು ಪ್ರಶ್ನಿಸಿ ರಾಣಾ ಇಲ್ಲಾಮುದ್ದಿನ್ ಘಾಜಿ ಎಂಬುವವರು ಲಾಹೋರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸವಿಂಧಾನದ 45ನೇ ಪರಿಚ್ಛೇದದ ಪ್ರಕಾರ ಅಧ್ಯಕ್ಷರು ನೀಡಿರುವ ಕ್ಷಮಾಧಾನ ಖುರಾನ್ ಹಾಗೂ ಸುನ್ನಾಃಕ್ಕೆ ವಿರುದ್ಧವಾಗಿದೆ. ಏಕೆಂದರೆ ಆರೋಪಿಯಿಂದ ತೊಂದರೆಗೊಳಗಾದ ಕುಟುಂಬದವರನ್ನು ಹೊರತುಪಡಿಸಿ ಬೇರೆ ಯಾರಿಗೂ ಕ್ಷಮಾಧಾನ ನೀಡುವ ಹಕ್ಕಿಲ್ಲ ಎಂದು ಖುರಾನ್ ನಲ್ಲಿ ಹೇಳಲಾಗಿದೆ~ ಎಂದು ಅವರು ತಮ್ಮ ವಾಕಾಲತ್ತಿನಲ್ಲಿ ಹೇಳಿದ್ದಾರೆ.