ದಾಂಪತ್ಯ ಜೀವನದಲ್ಲಿ ಪತಿ, ಪತ್ನಿಯನ್ನು ಸಮಾನ ದೃಷ್ಟಿಯಿಂದ ನಡೆಸಿಕೊಂಡು ಹೋದಲ್ಲಿ ಯಾವುದೇ ಸಮಸ್ಯೆ ಎದುರಾಗದು. ಆದರೆ, ಪರಸ್ಪರ ಅರ್ಥೈಸುವಿಕೆ ಕೊರತೆಯಿಂದ ಇಂದು ವಿಚ್ಛೇದನ ಪಡೆಯುವ ದಂಪತಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಧರ್ಮ, ಅರ್ಥ ಮತ್ತು ಕಾಮದಲ್ಲಿ ಯಾವುದೂ ಅತಿಯಾಗಬಾರದು. ಇದನ್ನು ಗಂಡ-ಹೆಂಡತಿ ತಿಳಿದಲ್ಲಿ ದಾಂಪತ್ಯ ಜೀವನ ಸುಖಮಯವಾಗುತ್ತದೆ ಎಂದು ಸ್ವಾಮೀಜಿ ಸಲಹೆ ನೀಡಿದರು.