ಹಾಗಾದರೆ, ಇವರು ನಡೆಸುವ ಧರಣಿ ಎಂಥದು? ನಾಲ್ಕು ದಶಕಗಳಿಗೂ ಮಿಕ್ಕಿ ರಾಜಕೀಯದಲ್ಲಿ ಮುಳುಗಿರುವ ಇವರು ತಮ್ಮ ಧರಣಿಯ ಉದ್ದೇಶದ ಬಗ್ಗೆ ಹೇಳುವುದಿಲ್ಲ ಬಿಡಿ! ಕಾವೇರಿ ಸಮಸ್ಯೆ ಸಮಸ್ಯೆಯಾಗೇ ಉಳಿದಿರುವುದಕ್ಕೆ ಕರ್ನಾಟಕದ ಶಾಸಕರು ಮತ್ತು ಸಂಸದರ ನಿಷ್ಕ್ರಿಯತೆ ಮತ್ತು ಅಧಿಕಾರ ಹಾಗೂ ಅದು ಒದಗಿಸುವ ಸವಲತ್ತುಗಳೇ ಕಾರಣವೆಂದರೆ ಅದು ಹೇಗೆ ತಪ್ಪಾದೀತು?