ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕು ನಿಮ್ಮ ಸಹವಾಸ: ಯಡಿಯೂರಪ್ಪ

Last Updated 13 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಮಾತುಕತೆ ಹಂತ ಮೀರಿದೆ. ಒಂದು ಕಾಲು ಆಚೆ ಇಟ್ಟಿದ್ದೇನೆ~-
ಹೀಗೆ ಹೇಳಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಕಾನೂನು ಸಚಿವ ಸುರೇಶಕುಮಾರ್, ಪಕ್ಷದ ಮುಖಂಡ ಸಂತೋಷ್ ಅವರು ಡಾಲರ್ಸ್‌ ಕಾಲೊನಿಯ ಯಡಿಯೂರಪ್ಪ ಅವರ ನಿವಾಸಕ್ಕೆ  ಮನವೊಲಿಸಲು ಭಾನುವಾರ ತೆರಳಿದಾಗ ಹೀಗೆ ಹೇಳಿ ಅವರನ್ನು ದಂಗು ಬಡಿಸಿದರು ಎನ್ನಲಾಗಿದೆ.

`ನಿಮ್ಮಟ್ಟಿಗೆ ಮಾತನಾಡುವುದು ಏನೂ ಉಳಿದಿಲ್ಲ. ನಿಮ್ಮ ಸಹವಾಸ ಸಾಕು. ಬಿಜೆಪಿಯಿಂದ ಈಗಾಗಲೇ ನಾನು ಒಂದು ಕಾಲು ಹೊರಗಿಟ್ಟಿದ್ದೇನೆ. ನಿಮ್ಮ ದಾರಿ ನಿಮಗೆ; ನನ್ನ ದಾರಿ ನನಗೆ~ ಎಂದು ನೇರವಾಗಿಯೇ ಹೇಳಿದರು ಎಂದು ಗೊತ್ತಾಗಿದೆ.

ಇದರಿಂದ ತಬ್ಬಿಬ್ಬಾದ ಸಂಧಾನಕಾರರು `ಸರ್, ಆತುರ ಪಡಬೇಡಿ. ನಾಲ್ಕೈದು ತಿಂಗಳ ಬಳಿಕ ಎಲ್ಲವೂ ಸರಿ ಹೋಗುತ್ತದೆ~ ಎಂದು ಮನವೊಲಿಸಲು ಯತ್ನಿಸಿದರೂ ಅವರು ಸಮಾಧಾನಗೊಂಡಿಲ್ಲ ಎನ್ನಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT