ನವದೆಹಲಿ (ಪಿಟಿಐ): ಟೆಲಿಕಾಂ ಹಗರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಮಾಜಿ ಕೇಂದ್ರ ಸಚಿವ ಸುಖ್ರಾಂ ಕೊನೆಗೂ ಶನಿವಾರ ಸ್ಥಳೀಯ ಕೋರ್ಟ್ಗೆ ಶರಣಾಗಿದ್ದಾರೆ.
ಗುರುವಾರ ಸಂಜೆಯೊಳಗೆ ಕೋರ್ಟ್ಗೆ ಶರಣಾಗಬೇಕೆಂದು ಅವರಿಗೆ ಈ ಮೊದಲು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದ್ದರೂ, ಅನಾರೋಗ್ಯದ ಕಾರಣ ನೀಡಿ ಅವರು ನುಣುಚಿಕೊಂಡಿದ್ದರು. ಅಲ್ಲದೆ ಸುಖ್ರಾಂ ಕೋಮಾ ಸ್ಥಿತಿಯಲ್ಲಿದ್ದಾರೆ ಎಂದು ಅವರ ವಕೀಲರು ಶುಕ್ರವಾರವಷ್ಟೇ ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೆ ಸುಖ್ರಾಂ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು , `ಸುಖ್ರಾಂ ಕೋಮಾಗೆ ಹೋಗಿಲ್ಲ~ ಎಂದು ವ್ಯತಿರಿಕ್ತ ಹೇಳಿಕೆ ನೀಡಿದ್ದರು.