ಸುಪ್ರೀಂ ಕೋರ್ಟ್, ಕಳೆದ ಡಿಸೆಂಬರ್ 2009ರಲ್ಲಿ ಮುಷರಫ್ ಅವರು ನೀಡಿದ ಕ್ಷಮಾದಾನವನ್ನು ರದ್ದು ಪಡಿಸಿತ್ತು. ಅಂದಿನಿಂದ ಭ್ರಷ್ಟಚಾರದ ಪ್ರಕರಣಗಳಲ್ಲಿ ಸಿಲುಕಿದ್ದ ಅಧ್ಯಕ್ಷ ಜರ್ದಾರಿ ಸೇರಿದಂತೆ ಕ್ಷಮಾದಾನದ ಫಲಾನುಭವಿಗಳಾದ 8000ಕ್ಕೂ ಅಧಿಕ ಮಂದಿಯ ವಿರುದ್ಧದ ಪ್ರಕರಣಗಳನ್ನು ಪುನಃ ಕೈಗೆತ್ತಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದೆ.