10 ವರ್ಷಗಳ ಬಳಿಕ ಈ ಟೂರ್ನಿಗೆ ಕರ್ನಾಟಕ ಆತಿಥ್ಯ ವಹಿಸುತ್ತಿದೆ. 2011ರಲ್ಲಿ ಕೇರಳದಲ್ಲಿ ನಡೆದ ಟೂರ್ನಿಯ ಫೈನಲ್ನಲ್ಲಿ ಕರ್ನಾಟಕ ಎದುರು ಗೆದ್ದ ತಮಿಳುನಾಡು ತಂಡ ಚಾಂಪಿಯನ್ ಆಗಿತ್ತು. ಆದರೆ ಕರ್ನಾಟಕ ಈ ಬಾರಿ ಬೌಲಿಂಗ್ನಲ್ಲಿ ಅನುಭವಿಗಳ ಕೊರತೆ ಎದುರಿಸುತ್ತಿದೆ. ಏಕೆಂದರೆ ಆರ್.ವಿನಯ್ ಕುಮಾರ್, ಎಸ್.ಅರವಿಂದ್ ಹಾಗೂ ಎನ್.ಸಿ.ಅಯ್ಯಪ್ಪ ಅವರ ಸೇವೆ ಲಭ್ಯರಾಗುತ್ತಿಲ್ಲ.