ಉಪನ್ಯಾಸಕ ಶರಣಪ್ಪ ಬಿರಾದಾರ, ಶಿವಾಜಿರಾವ ಪಾಟೀಲ ಮುಂಗನಾಳ ಮಾತನಾಡಿದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷ ಧೊಂಡಿಬಾ ನರೋಟೆ ಅಧ್ಯಕ್ಷತೆ ವಹಿಸಿದರು. ಮೆಹಕರ್ ಮಹಾರಾಜ, ಬಸವರಾಜ ದೇಶಮುಖ, ಕೇರಬಾ ಪವಾರ, ರಹೀಮ್ಸಾಬ್, ಕುಮಾರ ದೇಸಾಯಿ, ಮುಕ್ತೆ ಶ್ರೀಮಂಗಲೆ, ಬಂಡೆಪ್ಪ ಕೋಟೆ, ಬಸವರಾಜ ಸೇರಿದಂತೆ ವಿವಿಧ ಸಮಾಜ ಧುರೀಣರು ಉಪಸ್ಥಿತರಿದ್ದರು. ಜೀತಪ್ಪ ಮುಸ್ತಾಪುರೆ ಸ್ವಾಗತಿಸಿ ನಿರೂಪಿಸಿದರು. ಬಾಲಾಜಿ ವಂದಿಸಿದರು. ಪಲ್ಲವಿ, ಪ್ರೀಯಾಂಕಾ ಪ್ರಾರ್ಥನೆ ಗೀತೆ ಹಾಡಿದರು.