ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ಕಾರ್ಯ ತಂದ ಕುತ್ತು: ಪಾಕ್ ಅಧಿಕಾರಿ ಸೇವೆಯಿಂದಲೇ ವಜಾ

Last Updated 2 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಹಿಂದೂ ಮತ್ತು ಸಿಖ್ಖರ ಪೂಜಾ ಮಂದಿರಗಳಲ್ಲಿ ಪಾತ್ರೆ ತೊಳೆಯುವ, ನೆಲ ಒರೆಸುವ, ಶೂ ಪಾಲಿಶ್ ಮಾಡುವಂತಹ `ಸೇವಾ~ ಕೈಂಕರ್ಯ ಮಾಡಿದ್ದು ಪಾಕಿಸ್ತಾನದ ಉಪ ಅಟಾರ್ನಿ ಜನರಲ್ ಒಬ್ಬರ `ಸೇವೆ~ಗೆ ಕುತ್ತು ತಂದಿದೆ.

ಪೆಶಾವರ ಮೂಲದ ಉಪ ಅಟಾರ್ನಿ ಜನರಲ್ ಖುರ್ಷಿದ್ ಖಾನ್ ಸದ್ಯ ನೇಪಾಳ ಮತ್ತು ಭೂತಾನ್‌ಗಳಿಗೆ ಖಾಸಗಿ ಭೇಟಿಗೆ ತೆರಳಿದ್ದು, ಅಲ್ಲಿನ ಮಂದಿರಗಳಲ್ಲಿ ಇಂತಹ  `ಸೇವೆ~ಗಳನ್ನು ಮಾಡಿದ್ದಾರೆ. ಇದರಿಂದ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ `ಸೇವೆ~ಯಿಂದಲೇ ವಜಾಗೊಂಡಿದ್ದಾರೆ.

ಅವರ ಜಾಗಕ್ಕೆ ಮತ್ತೊಬ್ಬರನ್ನು ನೇಮಿಸಲಾಗಿದೆ ಎಂದು ದೃಢೀಕರಿಸಿರುವ ಅಟಾರ್ನಿ ಜನರಲ್ ಇರ್ಫಾನ್ ಖಾದಿರ್, ಖಾನ್ ವಜಾಕ್ಕೆ ಏನು ಕಾರಣ ಎಂದು ತಿಳಿಸಿಲ್ಲ.ಸದ್ಯ ಕಠ್ಮಂಡುವಿನಲ್ಲಿರುವ ಖಾನ್, ಸೇವೆಯಿಂದ ವಜಾಗೊಂಡಿರುವ ವಿಷಯ ತಿಳಿದು ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಪಾಕ್‌ಗೆ ಹಿಂದಿರುಗಲು ನಿರ್ಧರಿಸಿರುವುದಾಗಿ `ಎಕ್ಸ್‌ಪ್ರೆಸ್ ಟ್ರಿಬ್ಯೂನ್~ ಪತ್ರಿಕೆಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

`ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ಆಗಿರುವ ನೋವನ್ನು ಇಂತಹ ಸೇವಾ ಕಾರ್ಯಗಳ ಮೂಲಕ ಹೋಗಲಾಡಿಸುವ ಪ್ರಯತ್ನ ಮಾಡುತ್ತಿದ್ದೇನೆ~ ಎಂದು ಖಾನ್ ಈ ಹಿಂದೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT