ಗಡಿ ಠಾಣ್ಯಗಳ ಪತನ
ನವದೆಹಲಿ, ಅ. 21- ಚೀಣ-ಭಾರತ ಗಡಿಯಲ್ಲಿರುವ ಭಾರತದ ಸ್ಥಾನಗಳ ಮೇಲೆ ನಿನ್ನೆ ಭಾರಿ ದಾಳಿ ಆರಂಭಿಸಿದ ಚೀಣೀಯರು ಇಂದು ದಾಳಿಯನ್ನು ಸಾಕಷ್ಟು ಬಲವಾಗಿ ಮುಂದುವರಿಸಿ, ನೀಫ ಪ್ರದೇಶದಲ್ಲಿ ನಾಮ್ಕಚು ನದಿಯ ಇನ್ನಷ್ಟು ದಕ್ಷಿಣಕ್ಕೆ ಮುನ್ನಡೆದಿದ್ದಾರೆಂದು ರಕ್ಷಣಾ ಸಚಿವ ವಿ.ಕೆ. ಕೃಷ್ಣಮೆನನ್ರವರು ಇಂದು ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.
ಗೃಹ ಸಚಿವ ಶಾಸ್ತ್ರಿ ಕರೆ