ಕೇರಳದಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿತ ಅಂತ್ಯ
ತಿರುವನಂತಪುರ, ಅ. 7- ಪ್ರಜಾ ಸೋಷಲಿಸ್ಟ್ ಪಕ್ಷವು ಇಂದು ಕೇರಳ ಸಂಪುಟವನ್ನು ತ್ಯಜಿಸಿದುದರಿಂದ ರಾಜ್ಯದಲ್ಲಿ ಸುಮಾರು 32 ತಿಂಗಳಿಂದ ಅಧಿಕಾರದಲ್ಲಿದ್ದ ಸಮ್ಮಿಶ್ರ ಸರ್ಕಾರದ ಆಡಳಿತ ಕೊನೆಗೊಂಡಿತು.
ಜಂಬೂಸವಾರಿಗೆ ಭರದ ಸಿದ್ಧತೆ
ಮೈಸೂರು, ಅ. 7- ಮಂಗಳವಾರ ನಡೆಯಲಿರುವ ಜಗತ್ಪ್ರಸಿದ್ಧ ಜಂಬೂಸವಾರಿಯನ್ನು ವೀಕ್ಷಿಸಲು ಅಧಿಕ ಸಂಖ್ಯೆಯಲ್ಲಿ ಹೊರಗಿನಿಂದ ಜನ ಇಂದಿನಿಂದ ಬರತೊಡಗಿದ್ದಾರೆ. ಇಂದು ಸಂಜೆ ಮಳೆ ಇಲ್ಲದೆ ವಾತಾವರಣ ಹಿತಕರವಾಗಿತ್ತು.