ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲಗೆಗೆ ಗತ್ತು ನೀಡುವ ಹನುಮಂತಪ್ಪ

Last Updated 29 ನವೆಂಬರ್ 2011, 7:40 IST
ಅಕ್ಷರ ಗಾತ್ರ

ಕುಣಿಯುವ ಹುಮ್ಮಸ್ಸು ನೀಡು ಸಾಂಪ್ರದಾಯಿಕ ವಾದ್ಯಗಳಲ್ಲಿ ಹಲಗೆ ವಾದ್ಯವೂ ಒಂದು. ಚರ್ಮದಿಂದ ಸಿದ್ಧಪಡಿಸಿ, ಎರಡು ತೆಳು ಬಿದಿರಿ ನೊಂದಿಗೆ ಹಲಗೆಯನ್ನು ಬಾರಿಸ ತೊಡಗಿದರೆ ಎಂತಹವರಿಗೂ ಕುಣಿ ಯುವ ಹುಮ್ಮಸ್ಸು ಮೂಡಿ ಬಿಡುತ್ತದೆ.
 
ಅದನ್ನೇ ತಂಡ ಕಟ್ಟಿಕೊಂಡು, ಅದಕ್ಕೊಂದು ಗತ್ತು ಮೂಡಿಸುತ್ತಿರು ವವರಲ್ಲಿ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಬಡಾವಣೆಯಲ್ಲಿರುವ ಹನುಮಂತಪ್ಪ ಒಬ್ಬರಾಗಿದ್ದಾರೆ. ಇವರಿಗೆ ಪ್ರೋತ್ಸಾಹ ನೀಡಿ ಮಾರ್ಗದರ್ಶನ ನೀಡುತ್ತಿರುವವರು ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬ್ಯಾಳಿ ವಿಜಯಕುಮಾರಗೌಡ.

ವಂಶಪಾರಂಪರ್ಯವಾಗಿ ಹಲಗೆ ವಾದ್ಯವನ್ನು ನುಡಿಸುತ್ತಿರುವ ತಳವಾರ ಹನುಮಂತಪ್ಪನವರಿಗೆ ಗುರುಗಳೆಂದರೆ ಸಾರೆಪ್ಪರ ತಿಂದಪ್ಪ, ದುರುಗಪ್ಪ, ಸಾಲುಮನಿ ಮೂಗಪ್ಪ, ಬಿ. ಮರಿಯಪ್ಪ, ಉಚ್ಚಂಗಪ್ಪನವರಂಥ ಹಿರಿಯರು ಹಲಗೆ ವಾದ್ಯವನ್ನು ನುಡಿಸುವುದನ್ನು ಕಲಿಸಿದರು. ದೇಸಿ ವಾದ್ಯವಾಗಿರುವ ಹಲಗೆ ಎಲ್ಲ ಕಾಲಕ್ಕೂ ಸೈ ಎನಿಸಿ ಕೊಂಡಿರುವಂತಹದು.

ಮೊಹರಂ ಕುಣಿತದಿಂದ ಹೋಳಿ ಹುಣ್ಣಿಮೆಯ ಮೆರವಣಿಗೆಯವರೆಗೂ ಪಡ್ಡೆಗಳಿಗೆ ಥಟ್ಟನೆ ನೆನಪಾಗುವುದೇ ಹಲಗೆ ವಾದ್ಯ. ಹಲಗೆ ಒಂದೇ ಇರಲಿ, ಹತ್ತೇ ಇರಲಿ ಕುಣಿತ ಆರಂಭಗೊಂಡು ಬಿಡುತ್ತದೆ. ಇಂತಹ ವಾದ್ಯಕ್ಕೆ ಜಾನಪದ ಕಲೆಯ ರೀತಿಯಲ್ಲಿಯೇ ಅದಕ್ಕೊಂದು ಸ್ಥಾನ ದೊರಕಿಸಿ ಕೊಡಬೇಕೆಂದು ಹನುಮಂತಪ್ಪ 20 ವರ್ಷಗಳ ಹಿಂದೆಯೇ ತನ್ನಂತಯೇ ಇತರ 8 ಜನರ ತಂಡವನ್ನು ಕಟ್ಟಿದರು.
 
ಹೀಗೆ ಕಟ್ಟಿದ ತಂಡಕ್ಕೆ ಶ್ರೀ ಮದಗಾಂಬಿಕಾ ಜಾನಪದ ಹಲಗೆ ವಾದ್ಯ ತಂಡವೆಂಬ ಹೆಸರು ಕೊಟ್ಟು, ವಿವಿಧ ಕಾರ್ಯಕ್ರಮಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. 2006ರಲ್ಲಿ ಬಳ್ಳಾರಿಯಲ್ಲಿ ಏರ್ಪಡಿಸ ಲಾಗ್ದ್ದಿದ ಕನ್ನಡ ಸುವರ್ಣ ಸಾಂಸ್ಕೃತಿಕ ದಿಬ್ಬಣ, ಕನಕ ಜಯಂತಿ, ಹೊಸಪೇಟೆ, ಗಡಿಭಾಗವಾದ ಡಿ.ಹಿರೇಹಾಳ, ಚಿತ್ರದುರ್ಗದ ಶರಣರ ಮೇಳ, ಉಜ್ಜಯಿನಿ ರಥೋತ್ಸವ, ಕೊಟ್ಟೂರಿನ ರಥೋತ್ಸವ ಹೀಗೆ ಹಲವಾರು ರಥೋತ್ಸವ, ಕಾರ್ಯಕ್ರಮಗಳಲ್ಲಿ ತಮ್ಮ ತಂಡದ ಮೂಲಕ ಕೌಶಲ ಮೆರೆದಿದ್ದಾರೆ.

ಜಾನಪದ ಗಾಯಕ ಬಾನಂದೂರು ಕೆಂಪಯ್ಯನವರಿಂದಲೂ ಸೈ ಎನಿಸಿ ಕೊಂಡ ತಂಡ ಇವರದು. 2005ರಲ್ಲಿ ಹೊಸಪೇಟೆ ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಗುರು ವಂದನಾ ಮಹೋತ್ಸವದಲ್ಲಿ ಸೇವಾ ಪ್ರಶಸ್ತಿ ಯನ್ನು ತಂಡ ಪಡೆದಿದೆ.

ವಿವಿಧ ಸಂದರ್ಭಗಳಲ್ಲಿ ಪ್ರಶಂಸಾ ಪತ್ರಗಳನ್ನೂ ತಂಡ ಪಡೆದಿದೆ. ಹನುಮಂತಪ್ಪನವರ ತಂಡದಲ್ಲಿ ಪೂಜಾರ ಗಂಗಪ್ಪ, ಹನುಮಂತಪ್ಪ, ದುರುಗಪ್ಪ, ಮದರಾಸ ಬಸಪ್ಪ, ಮೈಲಪ್ಪರ ದುರುಗಪ್ಪ, ಜೆ. ಹುಚ್ಚಂಗಪ್ಪ, ದಂಡೆಪ್ಪರ ಅಂಜಿನಪ್ಪ, ಬೇವಿನಮರದ ಬಸಪ್ಪ ಇದ್ದಾರೆ.

ಈ ತಂಡದಲ್ಲಿ ತರುಣರೂ ಇದ್ದಾರೆ. ತಂಡದ ನಾಯಕತ್ವವನ್ನು ವಹಿಸಿರುವ ಹನುಮಂತಪ್ಪನವರಿಗೆ ಇದೀಗ 65ರ ಹರೆಯ. ಏಕೆಂದರೆ ಯಾವುದೇ ಯುವಕನಿಗೂ ಕಡಿಮೆ ಇಲ್ಲದಂತೆ ಹನುಮಂತಪ್ಪ ಬಿಡುವಿಲ್ಲದಂತೆ ಹಲಗೆಯನ್ನು ನುಡಿಸುತ್ತಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಈ ತಂಡಕ್ಕೆ ಮಾನ್ಯತೆ ನೀಡಿ ಕಾರ್ಯಕ್ರಮಗಳಿಗೆ ಅವಕಾಶ ನೀಡಿದೆ. ಈ ತಂಡಕ್ಕೆ ವಸ್ತ್ರಭೂಷಣ, ವಾದ್ಯ ಪರಿಕರಗಳ ಅವಶ್ಯಕತೆ ಇದೆ. ಹನುಮಂತಪ್ಪ ಅವರ ಹಲಗೆ ವಾದ್ಯ ತಂಡವನ್ನು ಸಂಪರ್ಕಿಸಲು ಬ್ಯಾಳಿ ವಿಜಯಕುಮಾರ ಗೌಡ (94496 22707) ಅವರನ್ನು ಸಂಪರ್ಕಿಸ ಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT