ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಸೇರಿದ ಮದ್ದೂರು ಅರಣ್ಯ ವಲಯದ ಬಿದುರು ತಳಕಟ್ಟೆ ಪ್ರದೇಶದಲ್ಲಿ ಹುಲಿ ದಾಳಿಗೆ ಹೆಣ್ಣಾನೆ ಬಲಿಯಾಗಿದೆ.
ಅಂದಾಜು 10 ವರ್ಷದ ಹೆಣ್ಣಾನೆಯನ್ನು ಕೊಂದು, ಅದರ ತಲೆ ಹಾಗೂ ಪೃಷ್ಠ ಭಾಗದ ಮಾಂಸವನ್ನು ಹುಲಿ ತಿಂದುಹಾಕಿದೆ. ಪಶು ವೈದ್ಯ ನಾಗರಾಜು ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದರು.
ಸಾಮಾನ್ಯವಾಗಿ ಆನೆ ಮೇಲೆ ಸಿಂಹ ದಾಳಿ ಮಾಡುತ್ತದೆ. ಹುಲಿ ದಾಳಿ ನಡೆಸುವುದಿಲ್ಲ. ಇದೊಂದು ಅಪರೂಪದ ಘಟನೆಯಾಗಿದೆ. ಕಳೆದ ಸೋಮವಾರ ಈ ದಾಳಿ ನಡೆದಿರಬಹುದು ಎಂದು ಅಂದಾಜಿಸಲಾಗಿದೆ ಎಂದು ಮದ್ದೂರು ವಲಯ ಅರಣ್ಯಾಧಿಕಾರಿ ಕೆ. ಪರಮೇಶ್ ತಿಳಿಸಿದ್ದಾರೆ.
ಹುಲಿ ದಾಳಿ: ಹಸು, ಕರು ಸಾವು
ಗೋಣಿಕೊಪ್ಪಲು: ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸು ಮತ್ತು ಕರುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿದ ಘಟನೆ ಮಂಗಳವಾರ ರಾತ್ರಿ ಪೊನ್ನಂಪೇಟೆ ಸಮೀಪದ ಬೆಕ್ಕೆಸೊಡ್ಲೂರಿನಲ್ಲಿ ನಡೆದಿದೆ.