ದೇವನಹಳ್ಳಿ: ಸುಮಾರು 50ವರ್ಷಗಳಿಂದ ಮುಚ್ಚಿಹೋಗಿದ್ದ ರಾಜಕಾಲುವೆಯನ್ನು ಪುರಸಭೆ ವತಿಯಿಂದ ಸರಿಪಡಿಸಲಾಯಿತು.
ಈ ಕುರಿತು ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಹನುಮಂತಪ್ಪ ಕೆಲ ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಪಟ್ಟಣದ ವಾರ್ಡುಗಳಲ್ಲಿ ಉತ್ತಮ ಚರಂಡಿ ವ್ಯವಸ್ಥೆ ಇದ್ದರೂ ಸಹ ಗಡಸು ನೀರು ಸಾರ್ವಜನಿಕರ ಮನೆಗೆ ನುಗ್ಗುತ್ತಿತ್ತು.
ಎಂಟು ದಿನಗಳಲ್ಲಿ ರಾಜಕಾಲುವೆಯಲ್ಲಿ ಹೂಳು ತೆಗೆಯಲಾಗುವುದು ಎಂದರು. ಪುರಸಭೆ ಸದಸ್ಯ ಜಿ.ಜನಾರ್ಧನ್, ನಿರ್ಮಲ ಮುನಿರಾಜು, ಪ್ರೇಮ ಮಲ್ಲಿಕಾರ್ಜುನ, ಶ್ರೀನಿವಾಸ್ ಇತರರು ಹಾಜರಿದ್ದರು.