ಲಖನೌ, (ಪಿಟಿಐ): ಮಂಗಳವಾರ ಸಂಭವಿಸಿದ ಹೇಮಗಿರಿ ಎಕ್ಸ್ಪ್ರೆಸ್ ರೈಲು ದುರಂತದಲ್ಲಿ ಸತ್ತ ಐಟಿಬಿಪಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆ 19ಕ್ಕೆ ಏರಿದೆ.
ನೌಕರಿಗಾಗಿ ಅರ್ಜಿ ಸಲ್ಲಿಸಲು 11ರಾಜ್ಯಗಳ ಸುಮಾರು 1.5 ಲಕ್ಷ ಯುವಕರು ರಾಯ್ಬರೇಲಿಗೆ ಬಂದಿದ್ದರು. ಕ್ಕಿಕಿರಿದು ತುಂಬಿದ್ದ ರೈಲುಗಳಲ್ಲಿ ಜಾಗ ಸಿಗದೆ ನೂರಾರು ಮಂದಿ ರೈಲಿನ ಮೇಲ್ಛಾವಣಿ ಮೇಲೆ ಪ್ರಯಾಣಿಸುವಾಗ ಮೇಲುಸೇತುವೆಗೆ ಅಪ್ಪಳಿಸಿ ಕೆಳಗೆ ಬಿದ್ದು ಮಂಗಳವಾರವೇ 14 ಜನ ಸತ್ತಿದ್ದರು. ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಇನ್ನೂ ಐದು ಮಂದಿ ಬುಧವಾರ ಸತ್ತರು.