ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪದಗಳ ಸರಸ–ಪದ ಸಂಪತ್ತಿನ ಗುರಿ’

Last Updated 23 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನೆಲಮಂಗಲ: ‘ಭಾಷೆ ನಿರಂತರವಾಗಿ ಹರಿಯುವ ಹೊಳೆ. ಭಾಷೆಯ ಘಟಕ ವಾದ ಶಬ್ದ ಕಾಲಕಾಲಕ್ಕೆ ರೂಪ ಹಾಗೂ ಅರ್ಥ ಬದಲಿಸುತ್ತಾ, ವಿಸ್ತರಿ ಸುತ್ತಾ ಬೆಳೆಯುತ್ತದೆ. ಅವುಗಳನ್ನು ಪರಿಚಯಿಸುವುದು, ಪದಗಳೊಂದಿಗೆ ಸರಸವಾಡುವುದು ಪದ ಸಂಪತ್ತಿನ ಉದ್ದೇಶ’ ಎಂದು ಓಂಕಾರ ಪ್ರಿಯ ಬಾಗೆಪಲ್ಲಿ ಕೆ.ನಾಗರಾಜು ತಿಳಿಸಿದರು.

ತಾಲ್ಲೂಕಿನ ಯಂಟಗಾನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬಾಗೆಪಲ್ಲಿ ಕನ್ನಡ ಸಂಸ್ಕ್ರತಿ ಸೇವಾ ಭಾರತಿ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಕನ್ನಡ ಪದ ಸಂಪತ್ತು’ 911ನೇ ವಿಶೇಷ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಚಾರಿತ್ರ್ಯವಂತ ವ್ಯಕ್ತಿ ಗಳಾಗಲು ಅಗತ್ಯವಾದ ನೀತಿ ಸಂಹಿತೆ ಯ ಪ್ರಮಾಣ ವಚನವನ್ನು ಬೊೋಧಿಸ ಲಾಯಿತು. ಯೋಜನಾಧಿಕಾರಿ ಬಿ. ಮಧುಸೂದನ್‌, ಉಪನ್ಯಾಸಕ ಎಚ್‌. ಲೋಕೇಶ್‌, ಹಿರಿಯ ಉಪನ್ಯಾಸಕ ಗೋವಿಂದಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT